ಮೆಡಿಸಿನ್ ಕರಾಳ ದಂಧೆ…..ಭಯಾನಕ ಭಾಗ -2.. ಹೃದಯ ಘಡ ಘಡ ಸಂಬಂಧ ಪಟ್ಟ ಅಧಿಕಾರಿಗಳೇ ಇನ್ನು ನಿಮ್ಮ ಕರ್ತವ್ಯ ಪ್ರಜ್ಞೆ ಇನ್ನೂ ಬದುಕಿದೆಯಾ …? ಅಥವಾ ಮನುಷತ್ವವೇ ಸತ್ತೋಯ್ತಾ….? ಆರೋಗ್ಯವೇ ಭಾಗ್ಯ ಆದರೆ ಆ ಭಾಗ್ಯನ ಕಿತ್ತುಕೊಳ್ಳುತ್ತಿರೋರು ಮಾತ್ರ ಮೆಡಿಸಿನ್ ಮಾಫಿಯಾ. ಅರೋಗ್ಯ ಸರಿ ಹೋಗಲಿ ಅಂತ ಮೆಡಿಸಿನ್ ತಗೊಂಡ್ರೆ ಸೀದಾ ಶಿವನ ಪಾದಾನೆ ಗತಿ. ಯಾಕೆಂದ್ರೆ ಇದು ಎಕ್ಸ್ ಪೈರ್ ಆಗಿರೋ ಮೆಡಿಸಿನ್ . ಈ ಕರಾಳ ದಂಧೆ ಬಗ್ಗೆ ಕಾರ್ಯಾಚರಣೆಗೆ ಇಳಿದಾಗ ಬಿಗ್ ಟಿವಿಗೆ ದೊಡ್ಡ ಅಪಾಯವೇ ಎದುರಾಯ್ತು, ಯಾವುದೇ ತೊಂದರೆಗೆ ಹೆದರದೆ ಕಾರ್ಯಾಚರಣೆ ನಡೆಸಿದಾಗ ಸಿಕ್ಕಿ ಬಿದ್ದ ಖದೀಮರು. ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಎಸಿ ಹಚ್ಚಿಕೊಂಡು ಆರಾಮಾಗಿ ಕೂತಿರೋದು ನೋಡಿದ್ರೆ ಇವರಿಗೆ ಸರ್ಕಾರ ಸಂಬಳ ಕೊಡೋದು ಎಸಿಯಲ್ಲಿ ಕೂರೋಕೋ ಅಥವಾ ಅಕ್ರಮಯಾಗಿ ನಡೀತಿರೋ ದಂಧೆಗಳಿಗೆ ಕಡಿವಾಣ ಹಾಕಿ ಜನರ ರಕ್ಷಣೆಗೋ ಅನ್ನೋ ಪ್ರಶ್ನೆ ಮೂಡುತ್ತೆ .ಜನರ ದುಡ್ಡೇ ನಿಮಗೆ ಸಂಬಳವಾಗಿ ಬರುತ್ತೆ. ಆದರೆ ಕೆಲವು ಅಧಿಕಾರಿಗಳು ಮಾತ್ರ ಯಾವುದೊ ಎಂಜಲು ಕಾಸಿಗೆ ಕೈ ಚಾಚುತ್ತಿದ್ದಾರಾ..?….
ಅವರ ಜೊತೆ ಒಳಗೆ ಒಪ್ಪಂದ ಮಾಡಿಕೊಂಡು ಆರಾಮಾಗಿದ್ದಾರಾ….?. ಜನರ ಜೀವ ಮತ್ತು ಜೀವನ ಲೆಕ್ಕ ವಿಲ್ಲದ ಹಾಗೆ ಮಾಡಿಬಿಟ್ಟಿದ್ದಾರಾ ಅನ್ನೋ ಪ್ರಶ್ನೆ ಮೂಡುತ್ತೆ ..ಈಗಲಾದ್ರೂ ನಿಮ್ಮ ಗೌರವ ಉಳಿಸ್ಕೊಳ್ತಿರಾ. ಇಂಥ ಖದಿಮರ ಹೆಡೆ ಮುರಿ ಕಟ್ಟಿ ಇವರನ್ನ ಒಳಗೆ ಹಾಕ್ತಾರಾ…?…. ಅಥವಾ ಇವರ ಚೇಲಾಗಳಾಗಿರ್ತೀರಾ ..? ಅನ್ನೋದು ಸಾರ್ವಜನಿಕರ ಮಾತಾಗಿದೆ….ಭಯಂಕರ ದ್ರಶ್ಯಾವಳಿಗಳು… ಕಾಯುತ್ತಿರಿ ಪಾರ್ಟ್ 3….ಮೋರನೇ ಸಂಚಿಕೆಯಲ್ಲಿ ಖದಿಮರ ಮೆಡಿಕಲ್ ಕರಾಳ ದಂಧೆಯ ಮುಖವನ್ನ ನಿಮ್ಮ ಮುಂದೆ ಬಿಚ್ಚಿದಲಿದೆ ನಿಮ್ಮ ಬಿಗ್ ಟಿವಿ ನ್ಯೂಸ್
bigtvnews | Hubli Dharwad News | Kannada News | Karnataka News Hubli News | News In Hubli | Local news

