Breaking News
Featured Video Play Icon

ಗಾಂಜಾ ಮಾರಾಟಗಾರರ ಭರ್ಜರಿ ಬೇಟೆ: ಹುಬ್ಬಳ್ಳಿ ಪೊಲೀಸ್ ಹೈ ಅಲರ್ಟ್..

ಗಾಂಜಾ ಮುಕ್ತ ನಗರದತ್ತ ಪೊಲೀಸ್ ನಡೆ..

ಯಥಾ ರಾಜಾ ತಥಾ ಪ್ರಜೆ ಹೈ ಅಲರ್ಟ್ ಆದ ಪೊಲೀಸ್ ಟೀಮ್..

ಗಾಂಜಾ ಜಾಲದ ಹಿಂದಿನ ರೂವಾರಿಗಳಿಗೆ ನಡುಕ..

ಬುಡ ಸಮೆತ ಕಿತ್ತರೆ ಗಾಂಜಾ ಘಾಟು ಕಡಿಮೆ ಆಗಬಹುದು !!

ನಗರ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲದ ವಿರುದ್ಧ ಹುಬ್ಬಳ್ಳಿ ಧಾರವಾಡ ಪೋಲೀಸರು ಸಮರ ಸಾರಿದ್ದಾರೆ.ಈ ನಿಟ್ಟಿನಲ್ಲಿ ಭರ್ಜರಿ ಕಾರ್ಯಾಚರಣೆ ಮಾಡಿ ಮೊದಲ ಹಂತವಾಗಿ ಗಾಂಜಾ ಮಾರಾಟಗಾರರ ಹಾಗೂ ಖರೀದಿದಾರರ ಹೆಡೆಮುರಿ ಕಟ್ಟುವಲ್ಲಿ ಹು-ಧಾ ಪೋಲಿಸ್ ಕಮಿಷ್ನರೇಟ್ ಯಶಸ್ವಿಯಾಗಿದೆ.,

ಇಷ್ಟು ದಿನ ಗಾಂಜಾ ಮತ್ತು ಡ್ರಗ್ಸ್ ಪ್ರಕರಣಗಳಲ್ಲಿ ಕೇವಲ ಮಾರಾಟಗಾರರನ್ನೇ ಬಂಧಿಸುತ್ತಿದ್ದ ಪೊಲೀಸರು ಇದೀಗ ಡ್ರಗ್ಸ್ ಮತ್ತು ಗಾಂಜಾ ಮೂಲಗಳನ್ನು ಪತ್ತೆ ಹಚ್ಚಿ ಬರೋಬರಿ ಹತ್ತು ಜನರ ಬಂಧನ ಮಾಡುವಲ್ಲಿ ಬೆಂಡಿಗೇರಿ ಠಾಣೆಯ ಪೋಲಿಸರು ಯಶಸ್ವಿಯಾಗಿದ್ದಾರೆ.ಬೆಳಂಬೆಳಿಗ್ಗೆ ಖಚಿತ ಮಾಹಿತಿ ಮೇರೆಗೆ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಹಾಗೂ ಅವರ ಬಳಿ ಖರೀದಿ ಮಾಡಲು ಜನರು ನಿಂತಿದ್ದಾರೆಂಬ ಮಾಹಿತಿ ಆಧರಿಸಿ ಬೆಂಡಿಗೇರಿ ಪೊಲೀಸರು

ಹು-ಧಾ ಪೋಲಿಸ್ ಆಯುಕ್ತ ಎನ್.ಶಶಿಕುಮಾರ್, ಹಾಗೂ ಡಿಸಿಪಿಗಳಾದ ಎಮ್.ನಂದಗಾವಿ, ರವೀಶ್ ಸಿ.ಆರ್ ಅವರ ಮಾರ್ಗದರ್ಶನದಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸ ಇನ್ಸ್ಪೆಕ್ಟರ್ ಅಲಿಶೇಖ್ ಅವರ ನೇತೃತ್ವದ ತಂಡ ದಾಳಿ ಮಾಡಿ ಗಾಂಜಾ ಮಾರಾಟಗಾರರು ಹಾಗೂ ಖರೀದಿದಾರರನ್ನು ಬಂಧಿಸಿದ್ದಾರೆ.ಬಂಧಿತರನ್ನು ಅಕಿಲೇಶ್ ಎರಮಾಶನ್,ಅಂತೋನಿ ಪರ್ನಾಂಡಿಸ್, ಕಿರಣ ಕುರಕುಂದಿ, ಮಹದೇವ ಮಜ್ಜಿಗುಡ್ಡ, ಪ್ರಕಾಶ ಕಲಾಲ್, ಅರುಣ ಕ್ಯಾಕಟ್ಟಿ, ಲಕ್ಷ್ಮಣ ನಿಡಗುಂದಿ, ಪರಾನ್ ನವಲಗುಂದ, ಆದರ್ಶ ಎರಮಶಲ್, ವಿಶಾಲ ಗಾಯಕವಾಡ ಎಂದು ಗುರುತಿಸಲಾಗಿದೆ. ಇವರಿಂದ ಒಟ್ಟು 1.78 ಲಕ್ಷ ಕಿಮ್ಮತ್ತಿನ 1.779 ಕೆಜಿ ಹಾಗೂ 2000 ನಗದನ್ನು ವಶಪಡಿಸಿಕೊಂಡಿದ್ದಾರೆ.ಈ ಮೂಲಕ ಅವಳಿನಗರವನ್ನು ಗಾಂಜಾ ಮುಕ್ತ ನಗರವನ್ನಾಗಿ ಮಾಡುವಲ್ಲಿ ಪೊಲೀಸರು ಶಪಥ ಮಾಡಿದ್ದಾರೆ.ಇನ್ನು ಈ ಬಗ್ಗೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿದ್ದು, ಹು-ಧಾ ಪೋಲಿಸ್ ಕಮಿಷ್ನರೇಟ್ ವ್ಯಾಪ್ತಿಯ ಬೆಂಡಿಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 1.8 ಕೆಜಿ ಗಾಂಜಾ ವಶಪಡಿಸಿಕೊಂಡು, 10 ಜನರ ಬಂಧನ ಮಾಡಲಾಗಿದೆ. ಬಂಧಿತರು ಹುಬ್ಬಳ್ಳಿ ಹಾಗೂ ಅಕ್ಕಪಕ್ಕದ ನಿವಾಸಿಗಳಾಗಿದ್ದಾರೆ. ಬಂಧಿತರಲ್ಲಿ ಹಲವರ ಮೇಲೆ ಡ್ರಗ್ಸ್ ಹಾಗೂ ಗಾಂಜಾ ಮಾರಾಟದ ಕೇಸ್’ಗಳಿವೆ. ಈ ಬಗ್ಗೆ ತನಿಖೆ ನಡೆಸಲಾಗುವುದು. ಈ ಹಿಂದಿನ ಕೇಸ್’ಗಳನ್ನು ಪರಿಶೀಲಿಸಿದ್ದೇನೆ. ಅವುಗಳನ್ನು ಸಮಗ್ರ ತನಿಖೆಗೆ ಸೂಚಿಸಿದ್ದೇನೆ. ಗೋವಾ, ಮಿರಜ್, ಮಹಾರಾಷ್ಟ್ರ ಭಾಗದಿಂದ ಗಾಂಜಾ ಪೂರೈಕೆಯಾಗುವ ಮಾಹಿತಿ ಇದೆ. ಮುಂದಿನ ದಿನಗಳಲ್ಲಿ ನಗರವನ್ನು ಗಾಂಜಾ ಮುಕ್ತವನ್ನಾಗಿಸಲು ಶ್ರಮಿಸಲಾಗುವುದು ಎಂದರು.

Share News

About Shaikh BigTv

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *