Breaking News

ರಸ್ತೆ ಅಪಘಾತ : 3 ಜನ ಸಾವು

ನೆಲಮಂಗಲ: ತಾಲೂಕಿನ ರಾ.ಹೆದ್ದಾರಿ 75ರ ಕುಲುವನಹಳ್ಳಿ ಸಮೀಪ ಕ್ಯಾಂಟರ್​ ಲಾರಿ ಹಾಗೂ ಕಾಂಕ್ರೀಟ್​ ಕೆಲಸ ಮಾಡುವವ ಸಹಾಯಕರನ್ನು ಒಯ್ಯುತ್ತಿದ್ದ ಟೆಂಪೊ ನಡುವೆ ಸಂಭವಿಸಿದ ಅಪಘಾತದಲ್ಲಿ ಪಾದಚಾರಿ ಸೇರಿ 3 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ತುಮಕೂರು ತಾಲೂಕಿನ ಕಾಳೆನಹಳ್ಳಿ ನಿವಾಸಿ ಶಿವಗಂಗಪ್ಪ(55) ಮೃತ ಪಾದಚಾರಿ. ಯಾದಗಿರಿ ಜಿಲ್ಲೆಯ ಗುರುಮಠಕಲ್​ ತಾಲೂಕು ಸೀತಗುಂಟ ನಿವಾಸಿಗಾಳದ ಹುಸೇನಪ್ಪ(34), ನರಸಪ್ಪ(35) ಮೃತರು. ಸಾಬಣ್ಣ(40) ಬಂಗಾರಪ್ಪ(41), ಕಟ್ಟಪ್ಪ(38)ಲಕ್ಷಿ$್ಮ(30), ಅನುಮಂತಿ(27), ಶಾಂತಾ(38) ಗಾಯಾಳುಗಳು.
ಕುಲುವನಹಳ್ಳಿ ಸಮೀಪ ಭಾನುವಾರ ಸಂಜೆ ಸುಮಾರು 5 ಗಂಟೆಗೆ ತ್ಯಾಮಗೊಂಡ್ಲು ಕಡೆಯಿಂದ ಬಂದ ಕಾಂಕ್ರೀಟ್​ ಗ್ಯಾಂಗ್​ ವಾಹನ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವೇಳೆ ತುಮಕೂರು ಕಡೆಯಿಂದ ಬಂದ ಕ್ಯಾಂಟರ್​ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾಂಕ್ರೀಟ್​ ಗ್ಯಾಂಗ್​ ವಾಹನದ ಹಿಂಬದಿ ಕುಳಿತಿದ್ದ ಹುಸೇನಪ್ಪ ಹಾಗೂ ನರಸಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ವೇಳೆಗೆ ರಸ್ತೆ ದಾಟಲು ವಿಭಜಕದ ಮಧ್ಯೆ ನಿಂತಿದ್ದ ಪಾದಚಾರಿ ಶಿವಗಂಗಪ್ಪಗೆ ಕಂಬಿ ತಗುಲಿ ಅವರೂ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಟೆಂಪೊದಲ್ಲಿದ್ದ ಸಾಬಣ್ಣ, ಬಂಗಾರಪ್ಪ, ಕಟ್ಟಪ್ಪ, ಲ್ಮ, ಹನುಮಂತಿ, ಶಾಂತಾ ಅವರಿಗೆ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರ ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *