Breaking News

ಮುಡಾದಲ್ಲಿ ಹಗರಣ ಕುರಿತು ಸಿದ್ದರಾಮಯ್ಯ ಮಹತ್ವದ ಹೇಳಿಕೆ

ಬೆಂಗಳೂರ : ಮುಡಾದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ 42ನೇ ಸಿಸಿಹೆಚ್​​​​ ಕೋರ್ಟ್​​​ನಲ್ಲಿ ಇಂದು ಖಾಸಗಿ ದೂರು ದಾಖಲಾಗಿದೆ.

ಈ ಹಿಂದೆಯೂ ಮುಡಾ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಪಾಲರಿಗೆ ಅಬ್ರಹಾಂ ಅವರು ಸಿಎಂ ವಿರುದ್ಧ ದೂರು ನೀಡಿದ್ದರು. ಬಳಿಕ ರಾಜ್ಯಪಾಲರು ಸಿಎಂ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದರು.ಬಳಿಕ ರಾಜ್ಯಪಾಲರ ಶೋಕಾಸ್​ ನೋಟಿಸ್​​​ ಸಂಬಂಧ ತುರ್ತು ಸಚಿವ ಸಂಪುಟ ನಡೆಸಲಾಗಿದ್ದು, ಎಲ್ಲಾ ಸಚಿವರು ಸೇರಿ ಅಬ್ರಹಾಂ ನೀಡಿರುವ ದೂರು ಕಾನೂನಾತ್ಮಕವಾಗಿಲ್ಲ. ಅವರ ದೂರನ್ನು ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡುವ ಕುರಿತು ಸಂಪುಟ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿತ್ತು.

ಇನ್ನು ಅಬ್ರಹಾಂ ಎಂಬುವವರ ದೂರಿನಲ್ಲಿ ಹುರುಳಿಲ್ಲ. ಅವರೊಬ್ಬ ಬ್ಲ್ಯಾಕ್​​ ಮೇಲರ್ ಎಂದೂ ಸಿಎಂ ಗುಡುಗಿದ್ದು ಗೊತ್ತೇ ಇದೆ. ಇದಲ್ಲದೇ ಮೈಸೂರಿನ ಸ್ನೇಹಮಯಿ ಕೃಷ್ಣ ಎಂಬುವವರೂ ಸಿಎಂ ವಿರುದ್ಧ ಕೋರ್ಟ್​​​ನಲ್ಲಿ ಮೊನ್ನೆಯಷ್ಟೇ ಖಾಸಗಿ ದೂರು ನೀಡಿದ್ದರು.

Share News

About BigTv News

Check Also

ಉಸಿರುಗಟ್ಟಿಸಿ ಪತಿಯ ಹತ್ಯೆ; ಪತ್ನಿ ಸೇರಿ ಮೂವರ ಬಂಧನ

ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿದ ಆರೋಪದಡಿ ಪತ್ನಿ ಸೇರಿದಂತೆ ಮೂವರನ್ನು …

Leave a Reply

Your email address will not be published. Required fields are marked *