ಹುಬ್ಬಳ್ಳಿ: ಇಲ್ಲಿನ ಸವಿತಾ ಸಮಾಜವು ಅರವಿಂದನಗರದ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಆಗಸ್ಟ್ 31ರಂದು ನಡೆಸುವ ಅನ್ನಸಂತರ್ಪಣೆಗಾಗಿ ಚಿಲ್ ವಾಟ್ಸ್ಆ್ಯಪ್ ಗ್ರೂಪ್ ನಿಂದ 13ಕ್ವಿಂಟಲ್ ಅಕ್ಕಿಯನ್ನು ದೇವಸ್ಥಾನದಲ್ಲಿ ನೀಡಲಾಯಿತು.
ಸವಿತಾ ಸಮಾಜದ ಅಧ್ಯಕ್ಷ ರಘುನಾಥ ನಾರಾಯಣ ದಾಸ್, ಕಾರ್ಯದರ್ಶಿ ಪಾಂಡುರಂಗ ಮುಸ್ತಿಪಲ್ಲೆ ಅಕ್ಕಿ ಚೀಲಗಳನ್ನು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಚಿಲ್ ಗ್ರೂಪ್ನ ರಾಜು ಮುನವಳ್ಳಿ, ಹೇಮಲ್ ಷಾ, ಪ್ರದೀಪ್ ಷಾ, ಕಿರಣ ಅಡವಿ, ಅಜೇಯ ಜೋಶಿ, ಪ್ರದೀಪ ಜೋಶಿ, ವಾದೀರಾಜ ಕುಲಕರ್ಣಿ, ಆರ್.ಜೆ. ಅಂಕಿತಾ, ಕೃಷ್ಣ ಶಿರೂರ ಹಾಗೂ ಇತರರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

