ಧಾರವಾಡ: ಸಂಪಿಗೆನಗರ, ನೀಲ ಸಿಟಿ, ವ್ಯಾಸ ವಿಹಾರ ಲೇಔಟ್, ಶ್ರೀಶ್ ರೆಸಿಡೆನ್ಸಿ ಲೇಔಟ್ಗಳಲ್ಲಿ ವ್ಯಾಪಕವಾಗಿ ಮಳೆ ನೀರು ನುಗ್ಗಿದೆ. ಮನೆಯ ಮುಂದೆ ದೊಡ್ಡ ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ಜನ ಹೊರಗಡೆ ಬರಲೂ ಆಗುತ್ತಿಲ್ಲ.
ನೀರಿನೊಂದಿಗೆ ಹಾವು, ಚೇಳುಗಳು ಸಹ ಬರುತ್ತಿದ್ದು, ಜನ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಸ್ಥಳಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ, ಪ್ರೋಣ್ ಕ್ಯಾಮೆರಾ ಮೂಲಕ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಈ ವೇಳೆ ಅಧಿಕಾರಿಗಳೊಂದಿಗೆ ಸ್ಥಳೀಯರು ವಾಗ್ವಾದ ಕೂಡ ನಡೆಸಿದರು. ರಾಜಕಾಲುವೆ ಇಲ್ಲದೇ ಇರುವುದಕ್ಕೆ ನೀರು ಲೇಔಟ್ಗಳಿಗೆ ನುಗ್ಗಿ ಜನರಿಗೆ ತೊಂದರೆಯುಂಟು ಮಾಡುತ್ತಿದ್ದು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಅಲ್ಲಿನ ಜನ ಅಧಿಕಾರಿಗಳಿಗೆ ಒತ್ತಾಯಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

