ಸಂಡೂರು: ಸಂಡೂರು ಕ್ಷೇತ್ರದ ವಿಧಾನ ಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು, ಇಂದು ಕ್ಷೇತ್ರದ ವಿವಿಧೆಡೆ ಪ್ರಚಾರ ಆರಂಭಿಸಿದರು.
ಪತಿ ಇ ತುಕಾರಾಂ ಅವರೊಂದಿಗೆ ಯಶವಂತ ನಗರ, ಸೋಮಲಾಪುರದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.
ಪ್ರಚಾರದ ವೇಳೆ ಮಾತನಾಡಿದ ಅನ್ನಪೂರ್ಣ ಅವರು, ಯಶವಂತ ನಗರದಲ್ಲಿ ನಾವು ಬದುಕು ಕಟ್ಟಿಕೊಂಡಿದ್ದು ಇಲ್ಲಿನ ಜನ ಪ್ರತಿ ಬಾರಿಯೂ ನಮಗೆ ಹೆಚ್ಚಿನ ಮತ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ಬಾರಿಯೂ ಅದೇ ವಿಶ್ವಾಸ, ಪ್ರೀತಿ ತೋರುತ್ತಿದ್ದು, ನಿಮಗೆ ನಾನು ಎಂದೆಂದೂ ಋಣಿ ಎಂದರು.
ದೇವಸ್ಥಾನ, ಮಠಕ್ಕೆ ಭೇಟಿ ಯಶವಂತ ನಗರದ ಗಂಡಿ ಮಾಲಿಯಮ್ಮ ದೇವಸ್ಥಾನ ಮತ್ತು ಸಿದ್ದರಾಮೇಶ್ವರ ಮಠಕ್ಕೆ ಭೇಟಿ ನೀಡಿದ ಅನ್ನಪೂರ್ಣ ಅವರು ಆಶೀರ್ವಾದ ಪಡೆದರು.
ಸೋಲಾಪುರದಲ್ಲಿ ಮಾತನಾಡಿದ ಅನ್ನಪೂರ್ಣ ಅವರು, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

