ಶ್ರೀರಂಗಪಟ್ಟಣದ ತಾಲೂಕಿನ ದೇವರಾಯ ಹಳ್ಳಿಯ ದೇವಸ್ಥಾನದ ನಾಲೆಯಲ್ಲಿ ಕಳೆದ ಮಂಗಳವಾರ ಬೆಳಗ್ಗೆ ಸತ್ತ ಬಾಯ್ಲರ್ ಕೋಳಿಗಳು ತೇಲಿ ಬಂದಿವೆ. ಇದನ್ನು ಗಮನಿಸಿದ ದೇವಸ್ಥಾನದವರು ಸ್ಥಳೀಯ ಸಾರ್ವಜನಿಕರು ಭಯಭೀತರಾಗಿದ್ದಾರೆ. ಸ್ಥಳೀಯರು ಯಾವುದೋ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ ಬಂದು ಸತ್ತ ಕೋಳಿಗಳನ್ನು ನಾಲೆಯಲ್ಲಿ ಎಸೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ ಇದರಿಂದ ಹಕ್ಕಿ ಜ್ವರದ ಆತಂಕ ತಾಲೂಕಿನ ಎಲ್ಲೆಡೆ ವ್ಯಾಪಿಸಿದೆ. ತಕ್ಷಣ ಆಡಳಿತ ಮಂಡಳಿಯವರು ಇದರ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

