ರಾಜ್ಯದಲ್ಲಿ ಬೇಸಿಗೆ ಬಂದರೆ ಸಾಕು ನೀರಿನ ಸಮಸ್ಯೆ ಎದುರಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಖಾಸಗಿ ಮ್ಯುಚುವಲ್ ಫಂಡ್ ಸಹಾಯಕ ಉಪಾಧ್ಯಕ್ಷ ಹರೀಶ್ ಸದಾನಂದ ತೇರಗಾಂವಕರ್ ಅವರು ಮುಂದಾಗಿ ಯಶಸ್ವಿಯಾಗಿದ್ದಾರೆ. ತಾವು ವಾಸಿಸುವ ಅಪಾರ್ಟ್ಮೆಂಟ್ನಲ್ಲಿ ಕಳೆದ ವರ್ಷ ಮಳೆ ನೀರು ಸಂಗ್ರಹ ಘಟಕ ಅಳವಡಿಸಿ ನೀರಿನ ಸಮಸ್ಯೆಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.ಜೊತೆಗೆ ಹರೀಶ್ ಅವರು ತಮ್ಮ ಬಡಾವಣೆಯ ಜನರಿಗೆ ಮಳೆ ನೀರು ಸಂಗ್ರಹದ ಬಗ್ಗೆ ಅರಿವು ಮೂಡಿಸಿದ್ದಾರೆ. ಅಲ್ಲದೆ ಇವರನ್ನು ಅನುಸರಿಸಿ ಬಡಾವಣೆ ಹಾಗೂ ವಡಗಾವಿಯ ಸರಾಫ್ ಕಾಲೋನಿಯ ಎಂಟು ಕುಟುಂಬದವರು ತಮ್ಮ ಮನೆ ಹಾಗೂ ಅಪಾರ್ಟ್ಮೆಮಟ್ಗಳಲ್ಲಿ ಮಳೆ ನೀರು ಸಂಗ್ರಹ ಘಟಕ ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





