ಎರಡು ವರ್ಷಗಳ ಹಿಂದೆ ವೆಲ್ಗಟೂರ್ ಮಂಡಲದ ರಾಮನೂರು ಗ್ರಾಮದ ತಿರುಪತಿ ಎಂಬುವವನ ಜತೆ ವಿವಾಹ ಮಾಡಿಕೊಡಲಾಗಿತ್ತು. ಮದುವೆಯ ಸಮಯದಲ್ಲಿ, ಯುವತಿಯ ಪೋಷಕರು 55 ಲಕ್ಷ ರೂ. ವರದಕ್ಷಿಣೆ ಕೊಡಲು ಒಪ್ಪಿಕೊಂಡಿದ್ದರು. ಆದರೆ, 10 ಲಕ್ಷ ರೂ. ನೀಡಲು ಹಿಂದೇಟು ಹಾಕಿದರು. ಇದು ಪತಿಯ ಅಸಲಿ ಮುಖ ಕಳಚಲು ಒಂದು ಕಾರಣ.ಕನ್ನಡಿ ಮೇಲೆ ಬರೆದಿದ್ದ ಡೆತ್ನೋಟ್ನಲ್ಲಿ, ‘ಅಮ್ಮ, ಅಪ್ಪ, ನನಗೆ ಬದುಕಲು ಇಷ್ಟವಿಲ್ಲ. ನನ್ನ ಮಗನ ಬಗ್ಗೆ ಎಚ್ಚರದಿಂದಿರಿ. ದಯವಿಟ್ಟು ಆತನಿಗೆ ಮಾತ್ರ ನನ್ನ ಮಗುವನ್ನು ಕೊಡಬೇಡಿ’ ಎಂದಿದ್ದಾರೆ. ಇದರಿಂದಾಗಿ ಪ್ರಸನ್ನಲಕ್ಷ್ಮಿಯ ಸಂಬಂಧಿಕರು ಗುರುವಾರ ಬೆಳಗ್ಗೆ ಪ್ರತಿಭಟನೆ ನಡೆಸಿ, ಮಗಳ ಪತಿ ಮತ್ತು ಅತ್ತೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಉಪುನಿತಿ ಗಂಗಾಧರ್ ಅವರ ದೂರಿನ ಆಧಾರದ ಮೇರೆಗೆ ಯುವತಿಯ ಪತಿ, ಅತ್ತೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ,
bigtvnews | Hubli Dharwad News | Kannada News | Karnataka News Hubli News | News In Hubli | Local news

