ವಿದ್ಯಾರ್ಥಿನಿಯೊಬ್ಬಳು ಕಮಲಾನಗರದಲ್ಲಿರುವ ಶ್ರೀಕಾಂತ್ ಮನೆಯಲ್ಲಿ ಕಳೆದ ಒಂದು ವರ್ಷದಿಂದ ಬಾಡಿಗೆಗೆ ಇದ್ದಳು. ಈ ವೇಳೆ ಯುವತಿ ಮೇಲೆ ಕಣ್ಣಾಕ್ಕಿದ್ದ ಶ್ರೀಕಾಂತ್ ಯುವತಿಗೆ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಆದರೆ ಯುವತಿ ಶ್ರೀಕಾಂತ್ನಿಂದ ಅಂತರ್ ಕಾಯ್ದುಕೊಂಡಿದ್ದಳು. ಆದರೆ ಬೆನ್ನುಬಿದ್ದಿದ್ದ ಶ್ರೀಕಾಂತ್ ಆಕೆಗೆ ಪದೇ ಪದೇ ಕಿರುಕುಳ ನೀಡುತ್ತಲೆ ಇದ್ದನು. ಇದರಿಂದ ಬೇಸತ್ತಿದ್ದ ಯುವತಿ ಈ ವಿಷಯವನ್ನು ಆತನ ಪತ್ನಿಗೂ ತಿಳಿಸಿದ್ಳು. ಆದರೆ ಶ್ರೀಕಾಂತ ಆಗಲೂ ಕಿರುಕುಳ ನೀಡಲು ಆರಂಭಿಸಿದ್ದನು.ಅಷ್ಟೇ ಅಲ್ಲದೇ ಶ್ರೀ ಕಾಂತ್ ಜೇಬಿನಲ್ಲಿದ್ದ ಚಾಕುವಿನಿಂದ ಯುವತಿ ಮತ್ತು ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದನು. ಘಟನೆಯಲ್ಲಿ ಯುವತಿ ಮತ್ತು ಆಕೆಯ ಸ್ನೇಹಿತ ಮುಖಕ್ಕೆ ಹಾನಿಯಾಗಿದ್ದು. ಘಟನೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

