ಗಾಯಗೊಂಡಿದ್ದ ತನ್ನ ಮೊಮ್ಮಗನಿಗೆ ಸುಮಾರು ಅರ್ಧ ಗಂಟೆ ಕಾಲ 72 ವರ್ಷದ ವೃದ್ಧೆಯೊಬ್ಬರು ಡ್ರಿಪ್ಸ್ ಬಾಟಲಿ ಹಿಡಿದು ನಿಂತಿದ್ದ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭ ಬಾಯಿ ಪಟೇಲ್ ಆಸ್ಪತ್ರೆಯಲ್ಲಿ ನಡೆದಿದೆ. ಈ ವೇಳೆ ಗಾಯಾಳು ಬಾಲಕನಿಗೆ ಡ್ರಿಪ್ಸ್ ಬಾಟಲಿ ಹಾಕಲು ಸ್ಟ್ಯಾಂಡ್ ಒದಗಿಸಿರಲಿಲ್ಲ ಎನ್ನಲಾಗಿದೆ.ಪ್ರತ್ಯಕ್ಷದರ್ಶಿಗಳ ಪ್ರಕಾರ, ಆಸ್ಪತ್ರೆಯಲ್ಲಿ ಡ್ರಿಪ್ಸ್ ಸ್ಟ್ಯಾಂಡ್ಗಳ ಯಾವುದೇ ಕೊರತೆ ಇರಲಿಲ್ಲ ಹಾಗೂ ಸಂತ್ರಸ್ತ ಗಾಯಾಳುವಿನೊಂದಿಗೆ ಆಸ್ಪತ್ರೆಯ ಸಿಬ್ಬಂದಿಗಳು ತಾರತಮ್ಯದಿಂದ ವರ್ತಿಸಿದರು ಎಂದು ಆರೋಪಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

