Breaking News

ಗ್ಯಾಸ್ ಅಪ್‌ಡೇಟ್ ಹೆಸರಿನಲ್ಲಿ ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಕೋಟ: ಗ್ಯಾಸ್ ಅಪ್‌ಡೇಟ್ ಹೆಸರಿನಲ್ಲಿ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಳಹಳ್ಳಿ ಗ್ರಾಮದ ಬಸವಪುರದ ಗಣಪತಿ ರಾಮಣ್ಣ ಶೆಟ್ಟಿ ಎಂಬವರ ಮೊಬೈಲ್‌ಗೆ ಫೆ.8ರಂದು ಕರೆ ಬಂದಿದ್ದು, ಮುಂಬೈ ಮಹಾನಗರ ಗ್ಯಾಸ್‌ನ ಅಪಡೇಟ್ ಮಾಡಲು ತಿಳಿಸಿ 12ರೂ. ಹಣ ಹಾಕಲು ತಿಳಿಸಿದ್ದರು. ಅದರಂತೆ ಗಣಪತಿ ಡೆಬಿಟ್ ಕಾರ್ಡನಿಂದ ಹಣವನ್ನು ಹಾಕಿದ್ದರು. ಆ ಬಳಿಕ ಫೆ.11ರಂದು ಹಾಗೂ 12ರಂದು ಇವರ ಖಾತೆಯಿಂದ 2,01,890ರೂ. ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *