ತನ್ನ ಲಾಠಿಯನ್ನೇ ಕೊಳಲನ್ನಾಗಿ ಮಾಡಿ ಸುಂದರವಾಗಿ ನುಡಿಸುವ ಪೋಲೀಸ್ ಹೆಡ್ ಕಾನ್ಸ್ ಟೇಬಲ್ಚಂದ್ರಕಾಂತ್ ಹುಟ್ಗಿ ಅವರನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ADGP ಭಾಸ್ಕರ್ ರಾವ್ ಕರೆಸಿಕೊಂಡು ಅವರಕಚೇರಿಯಲ್ಲಿ ಚಂದ್ರಕಾಂತ್ ನುಡಿಸಿದ ಗಾಯನವನ್ನು ಕೇಳಿ ಖುಷಿಪಟ್ಟರು. ಅಷ್ಟಕ್ಕೂ ಈ ರೀತಿ ಗಾಯನ ನುಡಿಸಲು ಆರಂಭಿಸಿದ್ದದು, ಅದು ಚುನಾವಣಾ ಕರ್ತವ್ಯಕ್ಕೆಂದು ಚಿಕ್ಕಮಗಳೂರಿನ ಪ್ರಸಿದ್ಧ ತಾಣಗಳಲ್ಲಿ ಒಂದಾದ ದತ್ತಪೀಠಕ್ಕೆ ಭದ್ರತೆಗೆ ತೆರಳಬೇಕಿತ್ತು. ಕರ್ತವ್ಯದಲ್ಲಿದ್ದಾಗ ನಾಲ್ಕೈದು ಗಂಟೆ ಒಂದೇ ಕಡೆ ಕುಳಿತುಕೊಳ್ಳಬೇಕಿತ್ತು. ಆಗ ಸುಮ್ಮನೆ ಕುಳಿತುಕೊಳ್ಳಲು ಚಂದ್ರಕಾಂತ ಎಸ್.ಹುಟಗಿ ಅವರಿಗೆ ಬೇಸರ ಮೂಡಿಸುತ್ತಿತ್ತಂತೆ. ಈ ಸಂದರ್ಭದಲ್ಲಿ ಅವರ ಕೈನಲ್ಲಿ ಹಿಡಿದಿದ್ದ ಫೈಬರ್ ಲಾಠಿಯೇ ಕೊಳಲಿನಂತೆ ಕಾಣಿಸಿದೆ. ಕರ್ತವ್ಯದಲ್ಲಿ ಕೊಳಲು ಹಿಡಿದು ಹೋಗಲು ಅವಕಾಶ ಇರಲಿಲ್ಲ. ಬಾಲ್ಯದಿಂದಲೂ ಪ್ರತಿಭಾವಂತರಾಗಿದ್ದ ಹುಟಗಿ ಫೈಬರ್ ಲಾಠಿಯೊಳಗೆ ಟೊಳ್ಳಾಗಿರುವುದು ಅರಿತಿದ್ದರೂ, ಮನೆಗೆ ಬಂದು ಆ ಲಾಠಿಗೆ ಡ್ರಿಲ್ನಿಂದ ರಂಧ್ರ ಕೊರೆಯಲು ಮುಂದಾದರು. ಹೀಗೆ ಮಾಡುವಾಗ ಆ ಲಾಠಿ ಮುರಿಯಿತಾದರೂ ಪ್ರಯತ್ನ ಬಿಡದೆ ಇನ್ನೊಂದು ಲಾಠಿ ಖರೀದಿಸಿ ಮತ್ತೆ ಪ್ರಯತ್ನ ಮುಂದುವರಿಸಿದರು. ಲಾಠಿಯನ್ನು ಕೊಳಲನ್ನಾಗಿಸುವಲ್ಲಿ ಯಶಸ್ವಿಯೂ ಆದರು. ಇವರ ಸಾಧನೆಯೇ ಹಿರಿಯ ಅಧಿಕಾರಿಗಳಿಗೂ ಖುಷಿಯಾಗಿದ್ದು , ಲಾಟಿಯ ಬಗ್ಗೆ ಗೇಲಿ ಮಾಡುತ್ತಿದ್ದವರಿಗೆ ಗಾಯನವೂ ಒಂದು ಉತ್ತಮ ಪಾಠ ಕಳಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





