ಚಾಮರಾಜನಗರ: ನಾಳೆ ನಡೆಯುವ ವಿಶ್ವಾಸ ಮತ ಯಾಚನೆಗೆ ನಾನು ಹೋಗುವುದಿಲ್ಲ ಎಂದು ಬಿ ಎಸ್ ಪಿ ಶಾಸಕ ಎನ್ ಮಹೇಶ್ ಇಂದಿಲ್ಲಿ ಹೇಳಿದ್ದಾರೆ. ಸಮ್ಮಿಶ್ರ ಸಕಾ೯ರದ ವಿಶ್ವಾಸ ಮತ ಯಾಚನೆ ವೇಳೆ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ತಟಸ್ಥರಾಗಿರುವುದಾಗಿ ಸ್ಪಷ್ಟಪಡಿಸಿದ್ದು, ವರಿಷ್ಠರಿಂದ ಸೂಚನೆ ಬಂದಿರುವ ಹಿನ್ನೆಲೆ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದರು. ವಿಶ್ವಾಸ ಮತ ಯಾಚನೆ ವೇಳೆ ತಟಸ್ಥರಾಗುವಂತೆ ಶಾಸಕ ಎನ್.ಮಹೇಶ್ ಗೆ ಮಾಯಾವತಿಯಿಂದ ಸೂಚನೆ ಬಂದಿರುವ ಹಿನ್ನಲ್ಲೆ ನನ್ನ ಖಾಸಗಿ ಕೆಲಸದಿಂದ ಎರಡು ದಿನ ಕಲಾಪಕ್ಕೆ ಭಾಗವಹಿಸಲಿಲ್ಲ. ಇನ್ನೆರಡು ದಿನ ನಾನು ಅಸೆಂಬ್ಲಿಗೆ ಹೋಗುವುದಿಲ್ಲ. ನನ್ನ ಕ್ಷೇತ್ರದಲ್ಲಿದ್ದು ಜನರ ಕೆಲಸ ಮಾಡುತ್ತೇನೆಂದು ಕೊಳ್ಳೇಗಾಲದಲ್ಲಿ ಬಿಎಸ್ಪಿ ಶಾಸಕ ಎನ್.ಮಹೇಶ್ ಹೇಳಿಕೆ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





