ಗದಗ: ಮನೆಯ ಮೇಲ್ಚಾವಣಿ ಓರ್ವ ಕುಸಿದು ವ್ಯಕ್ತಿ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ನಡೆದಿದೆ.ತಿಪ್ಪಣ್ಣ ಉಮ್ಮಣ್ಣವರ(೫೦) ಮೃತ ದುರ್ದೈವಿಯಾಗಿದ್ದು ತಿಪ್ಪಣ್ಣ ಹುಬ್ಬಳ್ಳಿಯ ಬೆಂಗೇರಿ ನಿವಾಸಿ ಎಂದು ತಿಳಿದು ಬಂದಿದೆ.ಕಪ್ಪತ್ತಗುಡ್ಡದ ಜಾತ್ರೆ ನಿಮಿತ್ತ ಡಂಬಳದಲ್ಲಿರುವ ಮಾವನ ಮನೆಗೆ ಬಂದಿದ್ದಾಗ ನಡೆದಿರೋ ಈಬದುರ್ಘಟನೆ ಸಂಭವಿಸಿದೆ.ಕುಟುಂಬ ಸದಸ್ಯರೆಲ್ರೂ ಸಹ ಮನೆಯೆಲ್ಲಿ ಮಲಗಿದ್ದರು..ಬೆಳಗಿನ ಜಾವ ಭಜನಾ ಮೇಳವನ್ನು ವೀಕ್ಷಿಸಿಲು ಉಳಿದ ಸದಸ್ಯರೆಲ್ರೂ ಹೊರಗಡೆ ಬಂದಿದ್ದಾರೆ. ಆಗ ತಿಪ್ಪಣ್ಣ ಒಬ್ಬನೇ ಮನೆಯಲ್ಲಿ ಮಲಗಿದ್ದಾನೆ. ಅಲ್ಲದೇ ಸತತ ಮಳೆಯಿಂದ ಮಣ್ಣಿನ ಮನೆ ನೆನೆದಿತ್ತು…ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





