ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಎಮ್.ಎನ್. ನಾಗರಾಜ್ ಹೇಳಿಕೆ.
ಹಣದಾಸೆಗೆ ವಿದ್ಯಾರ್ಥಿಯನ್ನು ಅಪಹರಿಸಿದ್ದ ಹತ್ತು ಆರೋಪಿಗಳ ಬಂಧನ.
ಶಾನು ಕಣವಿ, ಅಬ್ದುಲ್ರೆಹಮಾನ್ ಶಿರೂರ್, ಸೂರ್ಯಕಾಂತ ಬಂಡಾರಿ, ಶಿವರಾಜ ಉಮಚಗಿ, ಮಾರುತಿ ಹಣಗಿ, ಭರತ್ ಸರ್ವೋದೆ, ಮಹ್ಮದ್ಆಜಾದ್ ಕಾರಡಗಿ, ರವಿ ಬೆಟಗೇರಿ, ರಂಗನಾಥ ದಂಡಗಿ, ಹರೀಶ ಮಾಳಿ ಬಂಧಿತರು.
ವಿದ್ಯಾರ್ಥಿ ಅಬ್ದುಲ್ ರಫಾ (14)ನನ್ನು ಅಪಹರಿಸಿದ್ದರು.
ಉದ್ಯಮಿ ನಜೀರ್ಅಹ್ಮದ್ ಅತ್ತಾರ ಎಂಬುವರ ಮಗ ಅಬ್ದುಲ್ರಫಾ.
ಹುಬ್ಬಳ್ಳಿಯ ಸೇಂಟ್ ಆಂಥೋನಿ ಶಾಲೆಯ ಬಳಿಯಿಂದ ಅಪಹರಿಸಲಾಗಿತ್ತು.
ಜುಲೈ 30ರಂದು ಅಪಹರಿಸಿ ಒಂದು ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದರು.
ನಲ್ವತ್ತು ಲಕ್ಷ ರೂಪಾಯಿ ಕೊಟ್ಟು ಮಗನನ್ನು ಬಿಡಿಸಿಕೊಂಡಿದ್ದ ತಂದೆ ನಜೀರ್ಅಹ್ಮದ್.
ನಂತರ ವಿದ್ಯಾನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದ ನಜೀರ್ಅಹ್ಮದ್.
ಆಟೋರಿಕ್ಷಾ ಇಟಿಪಿಎಸ್ ಸಂಖ್ಯೆ ಗಮನಿಸಿ ಪೊಲೀಸರಿಗೆ ಹೇಳಿದ್ದ ಬಾಲಕ.
ಎರಡು ದಿನದಲ್ಲಿ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸರು.
ಪೊಲೀಸ್ ತನಿಖಾ ತಂಡಕ್ಕೆ ಬಹುಮಾನ ಘೋಷಣೆ..
bigtvnews | Hubli Dharwad News | Kannada News | Karnataka News Hubli News | News In Hubli | Local news





