ಆಂಕರ್: ಎರ್ ಶೋ ಲಖನೌಗೆ ಸ್ಥಳಾಂತರ ಮಾಡಿದ್ದು ಇದು ಸರಿಯಾದ ನಿರ್ಧಾರವಲ್ಲ. ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಮಲಾ ಸೀತಾರಾಮನ ಅವರನ್ನು ಭೇಟಿ ಮಾಡಿ ಸ್ಥಳಾಂತರ ಮಾಡದಂತೆ ಮನವಿ ಮಾಡಿದ್ದಾರೆಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಬಿಜೆಪಿಯ ಯಡಿಯೂರಪ್ಪ, ಸದಾನಂದಗೌಡ, ಅನಂತಕುಮಾರ್ ಶೆಟ್ಟರ್ ರಾಜ್ಯಕ್ಕೆ ಮಾಡಿದ ಅನ್ಯಾಯದ ಬಗ್ಗೆ ಪ್ರಶ್ನಿಸಲಿ. ಕೇಂದ್ರಕ್ಕೆ ನಿಯೋಗ ಕೊಂಡೋಯ್ದು ಏರಶೋ ಬೆಂಗಳೂರಿಗೆ ತರಲಿ ಎಂದು ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು. ಉತ್ತರ ಕರ್ನಾಟಕಕ್ಕೆ ಅನ್ಯಾಯದ ವಿಚಾರವಾಗಿ ಮಾತಾನಾಡಿದ ಅವರು ಅಖಂಡ ರಾಜ್ಯದ ಅಭಿವೃದ್ಧಿ ಬಗ್ಗೆ ನಮಗೆ ಕನಸಿದೆ. ರಾಜ್ಯದ ಮೂಲೇ ಮೂಲೆಗು ಅನುಧಾನ ಹಂಚಿಕೆಯಾಗಬೇಕು. ಪಶ್ಚಿಮ ವಾಹಿನಿಯ ನದಿಗಳ ತಿರುವು ಯೋಜನೆಗಳಿಗೆ ನಮ್ಮ ಸಹಮತ ಇದೆ. ನೀರಾವರಿ ಯೋಜನೆಗಳ ಕುರಿತು ಚರ್ಚಿಸಲು ಇದೆ 20 ರಂದು ಕೇಂದ್ರ ಸಚಿವರ ಭೇಟಿ ಇದೆ. ಕೇಂದ್ರ ನೀರಾವರಿ ಸಚಿವ ಗಡ್ಕರಿ ಭೇಟಿ ಮಾಡಿ ನೀರಿನ ಸದ್ಬಳಕೆಗೆ ಪ್ರಯತ್ನ ಮಾಡುತ್ತೆವೆ. ಮಹದಾಯಿ ನದಿನೀರು ಹಂಚಿಕೆ ವಿವಾದ. ನ್ಯಾಯಾಧಿಕರಣದ ಅಂತಿಮ ತೀರ್ಪು ಹೊರಬರಲಿದೆ. ನೀರಾವರಿ ಇಲಾಖೆ ಸಿದ್ದತೆ ಮಾಡಿಕೊಳ್ಳುತ್ತಿದೆ. ತೀರ್ಪು ನಮ್ಮಪರವಾಗಿ ಬರಲಿದೆ ಎಂಬ ಅಶಾಭಾವ ಹೊಂದಿದೆ. ಅಲಮಟ್ಟಿ ಎತ್ತರಿಸುವ ವಿಚಾರದಲ್ಲಿ ವಿಳಂಬವಾಗುತ್ತಿದೆ. ಅದಕ್ಕೆ ಅಲ್ಲಿನ ರೈತರ ಭೂಮಿಯನ್ನ ಸ್ವಾಧೀನ ಮಾಡಕೊಂಡು ಆಲಮಟ್ಟಿ ಜಲಾಶಯವನ್ನ ಎತ್ತರಿಸುತ್ತೆವೆಂದ್ರು… ಡಿ.ಕೆ.ಶಿವಕುಮಾರ್, ನೀರಾವರಿ ಸಚಿವ…
bigtvnews | Hubli Dharwad News | Kannada News | Karnataka News Hubli News | News In Hubli | Local news





