Breaking News

ವಿವಿಧ ಪ್ರದರ್ಶನಗಳಿಂದ ಮೇರುಗು ತುಂಬಿದ ವಚನ ವೈಭವ‌ ಕಾರ್ಯಕ್ರಮ


ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಶನಿವಾರದಂದು  ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧಾರವಾಡ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ ಸಹಯೋಗದೊಂದಿಗೆ ಬಸವ ಜಯಂತಿ ಪ್ರಯುಕ್ತ ನಗರದ ಶ್ರೀ ಕಾಮಾಕ್ಷಿ ಮಹಿಳಾ ಮಂಡಳ(ರಿ) ವತಿಯಿಂದ “ವಚನ ವೈಭವ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ವಿವಿಧ  ಮಹಿಳಾ ಮಂಡಳದವರು ಪಾಲ್ಗೊಂಡು ವಚನ ವಿಶ್ಲೇಷಣೆ ಹಾಗೂ ಸಮೂಹ ವಚನ ನೃತ್ಯ ಸ್ಪರ್ಧೆ ಹಾಗೂ ಸಮೂಹ ಗೀತ ವಚನ ನಾಟಕವನ್ನು ಪ್ರದರ್ಶನ ನೀಡಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಲಿಂಗರಾಜ ಅಂಗಡಿ, ಶ್ರೀಮತಿ ಡಾ. ಭಾರತಿ ಹಿರೇಮಠ, ವಿದುಷಿ ಶ್ರೀಮತಿ ಡಾ. ಸಹನಾ ಭಟ್, ಶ್ರೀಮತಿ ಡಾ. ಶೋಭಾ ಕರವೀರಶೇಟ್ಟರ, ಶ್ರೀಮತಿ ವಿದ್ಯಾ ವಂಟಮುರಿ ಹಾಗೂ ಶ್ರೀಮತಿ ಅಪರ್ಣಾ ಹೆಬಸೂರ ಉಪಸ್ಥಿತರಿದ್ದರು.

Share News

About admin

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *