ಹುಬ್ಬಳ್ಳಿ: ದಿ ಹುಬ್ಬಳ್ಳಿ ಬುದ್ದಿಸ್ಟ್ ಅಸೋಸಿಯೇಶನ್ ವತಿಯಿಂದ ಇಂದು ಇಲ್ಲಿನ ಮಂಟೂರು ರಸ್ತೆಯ ಬುದ್ಧ ವಿಹಾರದಲ್ಲಿ ಹಮ್ಮಿಕೊಂಡಿದ್ದ “ ಬುದ್ಧ ಪೂರ್ಣಿಮೆ ” ಕಾರ್ಯಕ್ರಮವನ್ನು ಶಾಸಕ ಪ್ರಸಾದ ಅಬ್ಬಯ್ಯ ಅವರು ಉದ್ಘಾಟಿಸಿ , ಅಂಬೇಡ್ಕರರ ಜ್ಞಾನ ಹಾಗೂ ಭಗವಾನ್ ಬುದ್ಧರ ಧ್ಯಾನ ಪ್ರಸ್ತುತ ವಿಶ್ವದಲ್ಲಿ ಭಾರತವನ್ನು ಗುರುತಿಸುವಂತಾಗಿದೆ ಎಂದು ತಿಳಿಸಿದರು .
ಶಾಂತಿ- ಸಮಾನತೆಯ ಸಾರವೇ ಬೌದ್ಧಧರ್ಮವಾಗಿದೆ.ಶಾಂತಿ ಬಯಸುವ ವಿಶ್ವದ ಬಹುತೇಕ ರಾಷ್ಟ್ರಗಳು ನಮಗೆ ಯುದ್ಧ ಬೇಡ.ಭಗವಾನ್ ಬುದ್ಧಬೇಕು ಎಂದು ಹೇಳುತ್ತಿದ್ದು , ಪ್ರಸ್ತುತ ಜಗತ್ತು ಭಾರತವನ್ನು ಗುರುತಿಸುತ್ತಿರಲು ಅಂಬೇಡ್ಕರರ ಜ್ಞಾನ , ಭಗವಾನ್ ಬುದ್ಧರ ಧ್ಯಾನ ಒಂದೇ ಆಗಿದೆ ಎಂದು ಹೇಳಿದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

