ಹುಬ್ಬಳ್ಳಿ: ನಗರದ ಸಿದ್ದಾರೂಢಸ್ವಾಮಿ ಮಠದಲ್ಲಿ ಏ .20 ರಿಂದ ಮೇ . 25 ರ ವರೆಗಿನ ಕಾಣಿಕೆ ಪೆಟ್ಟಿಗೆಗಳನ್ನು ತೆರೆದು ಎಣಿಕೆ ಮಾಡಲಾಗಿದ್ದು , 27.13 ಲಕ್ಷ ಹಣ , 17,711 ರೂ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಸಾಮಗ್ರಿ ಸಂಗ್ರಹವಾಗಿದೆ.ಮೇ .25 ರಂದು ಕಾಣಿಕೆ ಪೆಟ್ಟಿಗೆಗಳನ್ನು ಬ್ಯಾಂಕ್ ಆಫ್ ಇಂಡಿಯಾ , ಸಿದ್ಧಾರೂಢನಗರ ಶಾಖೆಯ ಮ್ಯಾನೇಜರ್ ಮತ್ತು ಸಿಬ್ಬಂದಿ ಮತ್ತು ಭಕ್ತರ ಸಮ್ಮುಖದಲ್ಲಿ ತೆರೆದು ಎಣಿಕೆ ಮಾಡಲಾಗಿ 27 , 13 , 974 ಸಂಗ್ರಹವಾಗಿದೆ . ಎಣಿಕೆ ಮೇಲ್ವಿಚಾರಣೆಯನ್ನು ಟ್ರಸ್ಟ್ ಕಮೀಟಿಯ ಚೇರಮನ್ ಧರಣೇಂದ್ರ ಭ.ಜವಳಿ , ವೈಸ್ ಚೇರಮನ್ ಡಾ.ಗೋವಿಂದ ಜಿ . ಮಣ್ಣೂರ ವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

