ಹುಬ್ಬಳ್ಲಿ ಜಿಲ್ಲೆಯಲ್ಲಿ ಪಂಚಮಸಾಲಿ ಸಮುದಾಯ ದೊಡ್ಡದಿದೆ ನಾವು ಬಹುಸಂಖ್ಯಾತರು ಆದರೆ ಇಲ್ಲಿ ಅಲ್ಪಸಂಖ್ಯಾತರು ಆಗಿದ್ದೇವೆ . ಸಿಎಂ ಬೊಮ್ಮಾಯಿಯವರೇ ಇದೇ ಕೊನೆ ಹಂತ ಆಗಸ್ಟ್ 22 ರೊಳಗೆ ನಮಗೆ ಮೀಸಲಾತಿ ನೀಡಿ ಮೀಸಲಾತಿ ಕೊಡದೆ ಇದ್ದರೆ ನಿಮ್ಮನ್ನ ಮನೆಗೆ ಕಳಿಸುತ್ತೇವೆ
ಅಷ್ಟೇ ಅಲ್ಲದೆ ಎಂತಹ ರಾಜಾಹುಲಿಗಳ ಬಂದರೂ ನಾವು ನೋಡಿಕೊಳ್ಳುತ್ತೇವೆ . ನಮ್ಮ ಕಡೆ ಒಂದು ಬಸವರಾಜ ಪಾಟೀಲ್ ಯತ್ನಾಳ ಎನ್ನುವ ಹೆಬ್ಬಲಿ ಇದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸರ್ಕಾರದ ವಿರುದ್ಧ ಗುಡುಗಿದ್ದಾರೆ
ನಗರದಲ್ಲಿ ಪಂಚಮಸಾಲಿ ಸಭೆಯಲ್ಲಿ ಮಾತನಾಡಿದ ಅವರು , ಕೊಟ್ಟ ಮಾತು ತಪ್ಪಿದ ಕಾರಣಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ನಮ್ಮ ಸಮಾಜದ ಶಾಪ ತಟ್ಟಿದೆ . ನಾವು ಬಹು ಸಂಖ್ಯಾತರು , ಕೊಟ್ಟ ಮಾತನ್ನ ಸಿಎಂ ಬಸವರಾಜ ಬೊಮ್ಮಾಯಿ ತಪ್ಪಬಾರದು . ಮಾತು ತಪ್ಪಿದ್ರೆ ನಮ್ಮ ಶಾಪ ನಿಮಗೆ ಮುಂದಿನ ದಿನಗಳಲ್ಲಿ ತಟ್ಟುತ್ತದೆ ಎಂದು ಎಚ್ಚರಿಕೆ ನೀಡಿದರು
bigtvnews | Hubli Dharwad News | Kannada News | Karnataka News Hubli News | News In Hubli | Local news





