ಶಿವಮೊಗ್ಗ : ನಗರದ ವಿನೋಬ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಗಾಡಿಕೊಪ್ಪದ ಬಾರ್ ವೊಂದರ ಸಮೀಪ ಯುವಕನೋರ್ವನ ಕೊಲೆ ಮಾಡಲಾಗಿದೆ . ಹೊಸಮನೆ ಬಡಾವಣೆ ನಿವಾಸಿ ಕಿರಣ್ ಕುಮಾರ್ ಯಾನೆ ಹುಚ್ಚಕಿರಣ ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ . ಸ್ನೇಹಿತರ ಜೊತೆ ಮಧ್ಯ ಸೇವಿಸಲು ಆಗಮಿಸಿದ್ದವೇಳೆ ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ . ಸ್ಥಳಕ್ಕೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ . ಹತ್ಯೆಗೆ ಕಾರಣವೇನೆಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news





