ಬಾಗಲಕೋಟೆ: ರಾಶಿ ಮಷಿನ್ಗೆ ಸೀರೆ ಸಿಲುಕಿ ಅವಘಡ ಸಂಭವಿಸಿದರಿಂದ ಮಹಿಳೆ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಶಿರೂರ ಗ್ರಾಮದಲ್ಲಿ ನಡೆದಿದೆ.
ಮೆಕ್ಕೆ ಜೋಳದ ರಾಶಿ ಮಾಡುವ ವೇಳೆ ಭಾನುವಾರ ಈ ಘಟನೆ ನಡೆದಿದೆ.
ರೇಣುಕಾ ಮಾದರ ಮೃತ ಮಹಿಳೆ. ರಾಶಿ ಮಾಡುವಾಗ ಮಷಿನ್ನಲ್ಲಿ ಮೆಕ್ಕೆ ಜೋಳ ಹಾಕುವ ಸಮಯದಲ್ಲಿ ಸೀರೆ ಸಿಲುಕಿದೆ. ಇದರಿಂದ ಮಷಿನ್ನಲ್ಲಿ ದೇಹ ಸಿಲುಕಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ತೋಗುಣಸಿ ಗ್ರಾಮದ ರೇಣುಕಾ ಎರಡು ದಿನಗಳ ಹಿಂದೆ ಶಿರೂರಗೆ ಬಂದಿದ್ದರು. ಇಂದು ಹೊಲದಲ್ಲಿ ಕೆಲಸ ಮಾಡಲು ಬಂದಾಗ ಈ ಘಟನೆ ನಡೆದಿದೆ.
ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

