ಕಾರ್ಯನಿಮಿತ್ತ ಇಂದು ರೇಷ್ಮೆ ನಗರ ರಾಮನಗರಕ್ಕೆ ತೆರಳಿದ್ದ ಸಮಯದಲ್ಲಿ ಡಿ. ಕೆ. ಶಿವಕುಮಾರ್ ಅವರ ಅಭಿಮಾನಿಗಳು ಬೃಹತ್ ಸೇಬು ಹಣ್ಣಿನ ಮಾಲೆ ಹಾಕುವ ಮೂಲಕ ಎಲ್ಲರ ಗಮನ ಸೇಳೆದಿದ್ದಾರೆ. ಉಪಮುಖ್ಯಮಂತ್ರಿ ಯಾದ ಬಳಿಕ ಇದೇ ಮೊದಲ ಭಾರಿಗೆ ಡಿ.ಕೆ ಶಿವಕುಮಾರ ಅವರು ರಾಮನಗರಕ್ಕೆ ಬೇಟಿ ನೀಡಿದ್ದು ಈ ಹಿನ್ನಲೆಯಲ್ಲಿ ಅಭಿಮಾನಿಗಳು ಬೃಹತ್ ಸೇಬು ಹಣ್ಣಿನ ಮಾಲೆ ತಮ್ಮ ನೆಚ್ಚಿನ ನಾಯಕನಿಗೆ ಶುಭ ಕೋರಿದ್ದಾರೆ. ಈ ರಾಮನಗರದಲ್ಲಿ ವೇಳೆ ರೋಡ್ ಶೋ ಸಹ ಮಾಡಿ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ಡಿ.ಕೆ.ಶಿವಕುಮಾರ ಅವರು ಅಭಿನಂದನೆ ತಿಳಿಸಿದರು , ಅಲ್ಲದೆ ಅವರ ಪೇಸ್ ಬುಕ್ ಪೇಜ್ ನಲ್ಲಿ ನನ್ನ ತವರು ಜಿಲ್ಲೆಯ ಜನ ಪ್ರೀತಿಯಿಂದ ನನ್ನನ್ನು ಬರಮಾಡಿಕೊಂಡರು. ಅವರ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿ. ಎಂದು ಬರೆದುಕೊಂಡಿದ್ದಾರೆ,
bigtvnews | Hubli Dharwad News | Kannada News | Karnataka News Hubli News | News In Hubli | Local news





