ನವಲಗುಂದ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡನೀಯವಾಗಿದ್ದು ಹಂತಕರನ್ನು ಗಲ್ಲಿಗೇರಿಸಬೇಕೆಂದು ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಆಗ್ರಹ ಮಾಡಿದರು.
ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅಭಿಮಾನಿಗಳ ಸಂಘದಿಂದ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಮಾತನಾಡಿದ ಅವರು ಜೈನ ಮುನಿಗಳು ಅಹಿಂಸಾವಾದಿಗಳು, ತಮಗೆ ನೋವು ಕೊಟ್ಟವರಿಗೂ ಒಳ್ಳೆಯದಾಗಲಿ ಎನ್ನುವಂತಹ ಉದಾರ ಮನೋಭಾವ ಹೊಂದಿದವರು ಅಂತಹ ಗುರುಗಳ ಹತ್ಯೆ ಮಾಡಿದ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಸಿದ್ದು ಪೂಜಾರ, ಮಲ್ಲೇಶ ಉಪ್ಪಾರ, ಇರ್ಫಾನ ಶಿರಸಂಗಿ, ಶಾನೂರ ಅಣ್ಣಿಗೇರಿ, ಮುನ್ನಾ ಕಲ್ಲಕುಟ್ರಿ, ಇರ್ಫಾನ ನಾಶಿಪುಡಿ, ಆಶೀಪ ನಾಗನೂರ, ಆಜಾದ ನಾಶಿಪುಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





