ನ್ಯೂಯಾರ್ಕ್: ಯುದ್ಧ ಇಡೀ ಜಗತ್ತನ್ನು ನಿಧಾನವಾಗಿ ಸಾವಿನ ಕೂಪಕ್ಕೆ ತಳ್ಳುತ್ತಿದೆ. ಅತ್ತ ಹಮಾಸ್ ಮತ್ತು ಇಸ್ರೇಲ್ ಮಧ್ಯೆ ಭೀಕರ ಕಾಳಗ ನಡೆಯುತ್ತಿದ್ದರೆ, ಇನ್ನೊಂದ್ಕಡೆ ಉಕ್ರೇನ್ ಹಾಗೂ ರಷ್ಯಾ ಹಾವು & ಮುಂಗುಸಿ ರೀತಿ ಕಿತ್ತಾಡುತ್ತಿವೆ. ಹೀಗೆ ಪರಿಸ್ಥಿತಿ ಕೈಮೀರಿ ಹೋದ ಸಮಯದಲ್ಲೇ ವಿಶ್ವಸಂಸ್ಥೆ ಹಮಾಸ್ ಉಗ್ರರಿಗೆ ಖಡಕ್ ಸೂಚನೆ ನೀಡಿದೆ. ಹಾಗಾದರೆ ಈಗ ಹಮಾಸ್ಗೆ ವಿಶ್ವಸಂಸ್ಥೆ ನೀಡಿರುವ ಸಂದೇಶ ಏನು?
ಯಾರದ್ದೋ ಕಿಚ್ಚು ಇನ್ಯಾರದ್ದೋ ಕಿತ್ತಾಟ. ಆದ್ರೂ ಅಮಾಯಕರು ಸಾಯುವುದು ಎಷ್ಟು ಸರಿ ಹೇಳಿ? ಈಗ ಹಮಾಸ್ ಹಾಗೂ ಇಸ್ರೇಲ್ ಕಿತ್ತಾಟದಲ್ಲಿ ಆಗುತ್ತಿರುವುದು ಕೂಡ ಇದೇ. ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು ಇಸ್ರೇಲ್ನ ವಿರುದ್ಧ ಒಂದೇ ಬಾರಿಗೆ 5000ಕ್ಕೂ ಹೆಚ್ಚು ರಾಕೆಟ್ ಉಡಾಯಿಸಿದ್ದರು. ಜೊತೆಗೇ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ರು. ಹೀಗೆ ಇಸ್ರೇಲ್ ಒಳಗೆ ನುಗ್ಗಿದ್ದ ಉಗ್ರರ ಗ್ಯಾಂಗ್, ನೂರಾರು ಅಮಾಯಕರ ಅಪರಹರಣ ಮಾಡಿದೆ. ಈ ಬಗ್ಗೆ ಇದೀಗ ವಿಶ್ವಸಂಸ್ಥೆ ಮುಖ್ಯಸ್ಥ ಖಡಕ್ ಮಾತು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





