Breaking News

ಸಾಲ ಪಡೆದು ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ FIR ದಾಖಲು…

ಬೆಂಗಳೂರಿ. ಗೋಕಾಕ್ ನಲ್ಲಿರುವ ಸೌಭಾಗ್ಯ ಲಕ್ಷ್ಮಿ ಶುಗರ್ ಫ್ಯಾಕ್ಟರಿ ಸಲುವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೋಟ್ಯಾಂತರ ರೂಪಾಯಿ ಸಾಲವನ್ನು ಪಡೆದುಕೊಂಡಿದ್ದು ಇದೀಗ ಸಾಲವನ್ನು ಮರುಪಾವತಿ ಮಾಡದೆ ಇದ್ದಿದ್ದರಿಂದ ಬೆಂಗಳೂರಿನ ವಿವಿ ಪುರಂ ಠಾಣೆಯಲ್ಲಿ ಸಾಹುಕಾರ್ ವಿರುದ್ಧ FIR ದಾಖಲಾಗಿದೆ.ಸೌಭಾಗ್ಯ ಲಕ್ಷ್ಮಿ ಮೈ ಶುಗರ್ ಕಂಪನಿ ಅಧ್ಯಕ್ಷರು ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಜಾರಕಿಹೊಳಿ ಈ ಒಂದು ಕಂಪನಿಯಲ್ಲಿ ವಸಂತ ಪಾವಡೆ ಹಾಗೂ ಶಂಕರ ಪಾವಡೆ ನಿರ್ದೇಶಕರಾಗಿ ಕೆಲಸ

ಮಾಡುತ್ತಿದ್ದಾರೆ.ಚಾಮರಾಜಪೇಟೆ ಕರ್ನಾಟಕ ರಾಜ್ಯ ಸಹಕಾರಿ ಅಪೇಕ್ಷೆ ಬ್ಯಾಂಕ್ ನಲ್ಲಿ 2013ರಿಂದ 2017 ರ ವರೆಗೂ ಕೂಡ ಹಂತ ಹಂತವಾಗಿ ಜಾರಕಿಹೊಳಿ 239. 87 ಲಕ್ಷಗಳನ್ನು ಸಾಲವಾಗಿ ಹಂತವಾಗಿ ಪಡೆದಿರುತ್ತಾರೆ.ನಂತರ 2013ರ ವರೆಗೆ 430 ಕೋಟಿ 7 ಲಕ್ಷ ರೂಪಾಯಿ ಸಾಲ ಬಾಕಿ ಇರುತ್ತದೆ.ಈ ಸಾಲವನ್ನು ಮರುಪಾವತಿ ಮಾಡಲೇ ಇರುವಂತ ಹಿನ್ನೆಲೆಯಲ್ಲಿ ಈ ಒಂದು ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 406 420 ಅಡಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕರ್ನಾಟಕ ರಾಜ್ಯ ಸಹಕಾರಿ ಅಪೇಕ್ಸ್ ಬ್ಯಾಂಕ್ ಮ್ಯಾನೇಜರ್ FIR ದಾಖಲಿಸಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *