Breaking News

ಲ್ಯಾಪ್‌ಟಾಪ್‌ ಕಳ್ಳತನ ಪ್ರಕರಣ : ಕಿಡಿಕಾರಿದ ಜೋಶಿ

ಹುಬ್ಬಳ್ಳಿ: ಕಾರ್ಮಿಕ ಇಲಾಖೆಯಲ್ಲಿ ಲ್ಯಾಪ್‌ಟಾಪ್‌ ಕಳ್ಳತನ ಪ್ರಕರಣ ಇದೆಲ್ಲ ಮಿಲಾಪಿ ಕುಸ್ತಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.

ಕಾರ್ಮಿಕ ಇಲಾಖೆಯ 101 ಲ್ಯಾಪ್ಟಾಪ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಮಕ್ಕಳಿಗೆ ಹಂಚಿಕೆ ಮಾಡೋ ಲ್ಯಾಪ್‌ಟಾಪ್ ಎಲ್ಲಿ ಹೋದ್ವು? ಅವರೇ ಭಾಗಿಯಾಗಿರ್ತಾರೆ. ನಂತರ ದೂರು ಕೊಡ್ತಾರೆ. ಇದೆಲ್ಲ ಮಿಲಾಪಿ ಕುಸ್ತಿ ಎಂದರು.

ನಿನ್ನೆ ಈ ವಿಚಾರ ದಿಶಾ ಸಭೆಯಲ್ಲೂ ಚರ್ಚೆ ಆಗಿದೆ. ಕಾರ್ಮಿಕ ಸಚಿವರ ತವರಿನಲ್ಲಿಯೇ ಇಂತಹ ಕಳ್ಳತನ ಪ್ರಕರಣ ಆಗಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ ಎಂದ ಜೋಶಿ ಆಗ್ರಹಿಸಿದರು.

Share News

About Shaikh BigTv

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *