Breaking News

ಅಂಚೆ ಇಲಾಖೆ ಸಂಪೂರ್ಣ ಡಿಜಿಟಲ್ ವೇದಿಕೆಯಾಗಿ ಪರಿವರ್ತನೆ: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ

ನವದೆಹಲಿ: ಅಂಚೆ ಇಲಾಖೆಯನ್ನು ಸಂಪೂರ್ಣ ಡಿಜಿಟಲ್ ವೇದಿಕೆಯನ್ನಾಗಿ ಪರಿವರ್ತಿಸುವ ಸಲುವಾಗಿ ವ್ಯಾಪಾರ ಪ್ರಕ್ರಿಯೆ ಪುನಾರಚನೆ ಕಾರ್ಯ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
ಭಾರತೀಯ ಅಂಚೆ ಮತ್ತು ದೂರಸಂಪರ್ಕ ಖಾತೆ ಹಾಗೂ ಹಣಕಾಸು ಸೇವೆಯ 50ನೇ ಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಅಂಚೆ ಸೇವೆಯೆಂದರೆ ಜನಸೇವೆ.
ಇ-ಕಾಮರ್ಸ್ ವಲಯದ ಬೆಳವಣಿಗೆಯ ಸಂದರ್ಭದಲ್ಲಿ ಇಲಾಖೆಯ ಈ ಪರಿವರ್ತನೆಯು ಅಗತ್ಯವಾಗಿದ್ದು ಈ ಹೊಸ ವ್ಯಾಪಾರ ಮಾರ್ಗದಲ್ಲಿ ಅಂಚೆ ಸೇವೆಗಳ ಪ್ರಸ್ತುತತೆಯನ್ನು ಉಳಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಸರಕುಸಾಗಣೆ ನಿಗಮವಾಗಿ (ಲಾಜಿಸ್ಟಿಕ್ಸ್ ಕಾರ್ಪೆರೇಷನ್) ಅಂಚೆ ಇಲಾಖೆ ಪರಿವರ್ತನೆಯಾಗಲಿದೆ. ಈ ಕ್ಷೇತ್ರದಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ಸಂಸ್ಥೆಯಾಗಲಿದೆ. 1.64 ಲಕ್ಷ ಅಂಚೆ ಕಚೇರಿಗಳನ್ನು ಹೊಂದಿರುವ ಇಲಾಖೆ ಈಗಾಗಲೇ ಜಗತ್ತಿನ ಅತಿ ದೊಡ್ಡ ವಿತರಣಾ ಜಾಲ ಹೊಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ರಾಮೀಣ ಅಂಚೆ ಸಿಬ್ಬಂದಿ ಈಗಲೂ ಮನೆ ಮನೆಗೆ ಭೇಟಿ ನೀಡುತ್ತಾರೆ’ ಎಂದು ವಿವರಿಸಿದರು.
ದೂರಸಂಪರ್ಕ ಕ್ಷೇತ್ರದಲ್ಲಿ ಕಳೆದ 50 ವರ್ಷಗಳಲ್ಲಿ ಆಗಿರುವ ಸಾಧನೆಯನ್ನು ಸಚಿವರು ಮೆಲುಕು ಹಾಕಿದರು. ‘ಕಳೆದ 10 ವರ್ಷಗಳ ಹಿಂದೆ 25 ಕೋಟಿಯಷ್ಟಿದ್ದ ಇಂಟರ್​ನೆಟ್ ಸಬ್​ಸ್ಕ್ರೈಬರ್​ಗಳ ಸಂಖ್ಯೆ ಈಗ 95 ಕೋಟಿಗೆ ತಲುಪಿದೆ. ದಿನಕ್ಕೆ 1 ಜಿಬಿ ಡೇಟಾ ಮಾತ್ರ ಖರ್ಚು ಮಾಡುತ್ತಿದ್ದ ಜನರು ಈಗ 20 ಜಿಬಿ ಡೇಟಾ ಬಳಸುತ್ತಿದ್ದಾರೆ. ಬ್ರಾಡ್​ಬ್ಯಾಂಡ್ ಸಬ್​ಸ್ಕ್ರೈಬರ್​ಗಳ ಸಂಖ್ಯೆ 6 ಕೋಟಿಯಿಂದ 92 ಕೋಟಿಗೆ ಮುಟ್ಟಿದೆ. 4ಜಿ ಕಾಲದಲ್ಲಿ ಜಗತ್ತನ್ನು ಭಾರತ ಹಿಂಬಾಲಿಸಿತ್ತು. 5ಜಿ ಕಾಲದಲ್ಲಿ ಜಗತ್ತಿನ ಜತೆ ಭಾರತ ಹೆಜ್ಜೆ ಹಾಕಿತು. 6ಜಿ ಕಾಲಘಟ್ಟದಲ್ಲಿ ಭಾರತವು ಜಗತ್ತನ್ನು ಮುನ್ನಡೆಸಲಿದೆ’ ಎಂದರು. ಸಮಾರಂಭದಲ್ಲಿ ಉಪರಾಷ್ಟ್ರಪತಿ ಜಗದೀಪ ಧನಕರ್ ಉಪಸ್ಥಿತರಿದ್ದರು.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *