ಉಚಿತ ಬಸ್ ಪ್ರಯಾಣದಿಂದಾಗಿ ಜನಸಂದಣಿಯಿಂದ ಕೂಡಿದ ಬಸ್ಗಳು ಕೆಲವರಿಗೆ ಕಳ್ಳತನಕ್ಕೆ ಅನುಕೂಲವಾಗಿದ್ದು,ಹಾಸನ ಜಿಲ್ಲೆಯ ಹೊಳೆನರಸೀಪುರದ ಸಾರಿಗೆ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಳ್ಳತನವಾದ ಘಟನೆಯಿಂದ ತನಿಖೆ ಆರಂಭಿಸಿದ ಹೊಳೆನರಸೀಪುರ ನಗರ ಠಾಣೆಯ ಪೊಲೀಸರು, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಗ್ರಾಮದ ನಾಲ್ವರು ಮಹಿಳೆಯರಾದ ಶಶಿ (35), ಮಾಧವಿ (40), ಅಕಿಲ (30), ಮತ್ತು ವಿದ್ಯಾ (29)ರನ್ನು ಬಂಧಿಸಿದ್ದಾರೆ. ಈ ಗ್ಯಾಂಗ್ನಿಂದ ₹6.38 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ, ಇದರಲ್ಲಿ 35 ಗ್ರಾಂ ಚಿನ್ನದ ಸರ, 22 ಗ್ರಾಂ ನೆಕ್ಲೇಸ್, 5 ಗ್ರಾಂ ಬೆಳ್ಳಿ ಗಣಪತಿ ಡಾಲರ್, ಮತ್ತು 29 ಗ್ರಾಂ ಚಿನ್ನದ ಸರ ಒಳಗೊಂಡಿವೆ. ಇನ್ಸ್ಪೆಕ್ಟರ್ ಪ್ರದೀಪ್ ಮತ್ತು ಪಿಎಸ್ಐ ಅಭಿಜಿತ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ಕಳ್ಳರ ಗ್ಯಾಂಗ್ ಸಿಕ್ಕಿಬಿದ್ದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

