ಪ್ರಿಯಕರನ ಜೊತೆಗೂಡಿ ಪತಿಗೆ ವಿಷ ಕುಡಿಸಿ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತ್ನಿಯೊಬ್ಬಳು, ಪತಿ ಸಾವಿನ ಬಗ್ಗೆ ಅನುಮಾನವಿದ್ದು ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ದೂರಿ ಇದೀಗ ಅದೇ ಪೊಲೀಸರಿಗೆ ತನ್ನ ಸುಪಾರಿ ತಂಡದೊಂದಿಗೆ ಅತಿಥಿಯಾಗಿದ್ದಾಳೆ!ಪ್ರಕರಣದ ದೂರುದಾರಳೂ ಆಗಿದ್ದ ಚಂದ್ರಕಲಾ ವರ್ತನೆಯಲ್ಲಾದ ಬದಲಾವಣೆ, ಪತಿ ಸಾವಿನ ಕುರಿತ ಮಾತುಗಳು ಆಕೆಯ ಪಾತ್ರವಿರುವುದರ ಕುರಿತು ಅನುಮಾನ ಮೂಡಿಸಿದ್ದವು. ಅದರ ಜಾಡು ಹಿಡಿದು ತನಿಖೆ ನಡೆಸಿದಾಗ ಆಕೆ ಮತ್ತು ಇಡೀ ತಂಡ ಸಿಕ್ಕಿಬಿದ್ದಿತು ಆರ್. ಶ್ರೀನಿವಾಸ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಂಗಳೂರು ದಕ್ಷಿಣ ಜಿಲ್ಲೆ.ದಂಪತಿ ಮಕ್ಕಳು ಓದುತ್ತಿದ್ದ ಶಾಲೆಯಲ್ಲೇ, ಆತನ ಮಕ್ಕಳು ಸಹ ಓದುತ್ತಿದ್ದರು. ಚಂದ್ರಕಲಾ ಮಕ್ಕಳನ್ನು ಬಿಡಲು ಹೋದಾಗ ಯೋಗೇಶ್ ಪರಿಚಯವಾಗಿತ್ತು. ನಂತರ ಅದು ಪ್ರೇಮಕ್ಕೆ ತಿರುಗಿತ್ತು ಎಂದು ಪೊಲೀಸರು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

