ಸಿಎಂ ಕುಮಾರಸ್ವಾಮಿ ಅವರು ಚಂಡರಕಿ ಗ್ರಾಮದಲ್ಲಿ ಇಂದು ಕೂಡ ಜನರ ಸಮಸ್ಯೆ ಅರಿಯುವ ಕೆಲಸ ಮಾಡಿದರು. ಚಂಡರಕಿ ಶಾಲೆಯಲ್ಲಿ ವಾಸ್ತವ್ಯ ಮಾಡಿ ನಂತರ ಬೆಳಿಗ್ಗೆ ಎದ್ದು ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಕಲಬುರಗಿ ಗ್ತಾಮ ವಾಸ್ತವ್ಯ ಕಾರ್ಯಕ್ರಮ ರದ್ದು ಮಾಡಿ ವ್ಯಾಪಸ ಚಂಡರಕಿಯಿಂದ ಬೆಂಗಳೂರಗೆ ಪ್ರಯಾಣ ಬೆಳೆಸಿದ್ರು.ಚಂಡರಕಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದು ಖುಷಿಕೊಟ್ಟಿದೆ ಎಂದ್ರು.ಈ ಕುರಿತು ವರದಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದಣಿಯದೇ ತಾಳ್ಮೆಯಿಂದ ನಿನ್ನೆ ರಾತ್ರಿವರೆಗು ಜನರ ಸಮಸ್ಯೆ ಅರಿಯುವ ಕೆಲಸ ಮಾಡಿದ್ರು.ಆದ್ರೆ,ಇಂದು ಬೆಳಿಗ್ಗೆ ಕೂಡ ಸಿಎಂ ಭೇಟಿಯಾಗಿ ಸಮಸ್ಯೆ ತೊಡಿಕೊಳ್ಳಲು ಬಂದ ನೂರಾರು ಜನರ ಅಹವಾಲು ಇಂದು ಕೂಡ ಸ್ವೀಕರಿಸಿ ಜನರ ನೋವಿಗೆ ಸ್ಪಂಧಿಸಿದ್ರು.ಪ್ರಮುಖವಾಗಿ ಅಪಘಾತ ಪ್ರಕರಣದಲ್ಲಿ ಗಂಭೀರಗೊಂಡು ಸಹಾಯಕ್ಕಾಗಿ ಸಿಎಂ ಅವರಲ್ಲಿ ಮನವಿ ಅಂಗಲಾಚಿದ ಮುನಗಲ್ ಗ್ರಾಮದ ಭೀಮರೆಡ್ಡಿಗೆ ಸಿಎಂ ಚಿಕಿತ್ಸೆ ವೆಚ್ಚಕ್ಕಾಗಿ ಮಾನವೀಯತೆ ಮೆರೆದಿದ್ದಾರೆ.ಭೀಮರೆಡ್ಡಿ ಅವರ ತಂದೆ ಶಂಕರ ಅವರಿಗೆ 5 ಲಕ್ಷ ರೂ ಚೆಕ್ ವಿತರಣೆ ಮಾಡಿ ಮಾನವಿ ಕಳಕಳಿ ತೊರಿದ್ದಾರೆ.ಬೆಳಿಗ್ಗೆ ಕೂಡ ಜನರ ಸಮಸ್ಯೆ ಕೇಳಿ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





