ದಾವಣಗೆರೆ : ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಉಂಟಾದ ತುಂಗಭದ್ರಾ ನದಿಯ ಪ್ರವಾಹದಿಂದ ಸುಮಾರು 25 ಕ್ಕು ಹೆಚ್ಚು ಮನೆಗಳು ಹಾನಿಯಾಗಿದೆ. ಗಂಗಾನಗರದಲ್ಲಿ ನೆರೆಹಾನಿಯಾಗಿದ್ದು ಸ್ಥಳೀಯರಿಗಾಗಿ ಜಿಲ್ಲಾಡಳಿತ ಗಂಜಿಕೇಂದ್ರ ತೆರೆದಿದೆ. ಇವತ್ತು ಗಂಜಿಕೇಂದ್ರ ಹಾಗೂ ಹೊಳೆ ವೀಕ್ಷಣೆಗೆ ಜಿಲ್ಲಾಧಿಕಾರಿ ಬರುತ್ತಿದ್ದಂತೆ ಹೈಡ್ರಾಮ ನಡೆಯಿತು. ಗಂಜಿಕೇಂದ್ರದಲ್ಲಿ ಪರಿಹಾರಕ್ಕಾಗಿ ಕಿತ್ತಾಟ ಉಂಟಾಯಿತು. ಹೊರಗಿನ ವ್ಯಕ್ತಿಗಳು ಗಂಜಿಕೇಂದ್ರದಲ್ಲಿ ಬರ್ತಿದ್ದಾರೆ ಅಂತ ಸ್ಥಳೀಯರಲ್ಲಿ ಗಲಾಟೆ ನಡೆಯಿತು. ಇನ್ನು ಗಂಗಾನಗರದ ಪ್ರದೇಶಕ್ಕೆ ಜಿಲ್ಲಾಧಿಕಾರಿ ಶಿವಮೂರ್ತಿ ಭೇಟಿ ನೀಡಿ ವೀಕ್ಷಣೆ ಮಾಡಿದರು. ನಂತರ ಪರಿಹಾರ ನೀಡುತ್ತೇವೆ ಅಂತ ಭರವಸೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





