ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಪೊಲೀಸ್ ಇಲಾಖೆ ಸಜ್ಜಾಗಿದೆ. ಪ್ರತಿ ವರ್ಷದಂತೆ ಈ ವರ್ಷ ಸಹ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ರಾಜ್ಯದ ಬೇರೆಬೇರೆ ಕಡೆಯಿಂದ ಸುಮಾರು 3 ಸಾವಿರ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗುತ್ತದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ್ ರಾವ್ ಹೇಳಿದ್ರು.
ಇದಕ್ಕಾಗಿ ಪೊಲೀಸ್ ಕಮಾಂಡೋ ವೆಹಿಕಲ್ ಬಳಕೆ ಮಾಡಲಾಗುತ್ತದೆ. ಪೊಲೀಸ್ ಕಮಾಂಡೋ ವೆಹಿಕಲ್ನಲ್ಲಿ ನಾಲ್ಕು ಸುತ್ತಿನಲ್ಲೂ ಮೊಬೈಲ್-ಮಾನವ ಸಿಸಿಟಿವಿಗಳಿರುತ್ತವೆ. ನಾಲ್ಕು ಡ್ರೋಣ್ ಕ್ಯಾಮೆರಾಗಳನ್ನು ದಸರಾ ಮಹೋತ್ಸವಕ್ಕೆ ಬಳಕೆ ಮಾಡಲಾಗುವುದು. ಸೂಕ್ಷ್ಮ ಪ್ರದೇಶಗಳಲ್ಲೆಲ್ಲಾ ಡ್ರೋಣ್ ಕ್ಯಾಮೆರಾ ಕಣ್ಗಾವಲಿರುತ್ತದೆ ಎಂದರು.
ಹೆಚ್ಚುವರಿಯಾಗಿ ಜಂಬೂಸವಾರಿ ಮಾರ್ಗದಲ್ಲಿ 60 ಸಿಸಿಟಿವಿ ಬಳಕೆ ಮಾಡಲಾಗುವುದು. ಕಳೆದ ಬಾರಿ ವಿವಿಐಪಿ ಪಾಸ್ಗಳ ಗ್ಯಾಲರಿಯಲ್ಲಿ ಒಂದಷ್ಟು ಗೊಂದಲ ಉಂಟಾಗಿತ್ತು. ಕಳೆದ ಬಾರಿಯಾದ ಸಮಸ್ಯೆಗಳನ್ನು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ. ದಸರಾ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಭದ್ರತೆ ನಿಯೋಜನೆ ಮಾಡಲಾಗಿದೆ ಎಂದು ಸುಬ್ರಮಣ್ಯೇಶ್ವರ್ ರಾವ್ ಮಾಹಿತಿ ನೀಡಿದ್ರು.
bigtvnews | Hubli Dharwad News | Kannada News | Karnataka News Hubli News | News In Hubli | Local news





