ಚೆನ್ನೈ : ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಏಳು ಜನ ಕೈದಿಗಳನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಚೆನ್ನೈನಲ್ಲಿ ಎಮ್ಡಿಎಂಕೆ ಪಕ್ಷದ ಅಧ್ಯಕ್ಷ ವೈಕೋ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಹಿನ್ನೆಲೆಯಲ್ಲಿ ತಮಿಳುನಾಡು ಗವರ್ನರ್ ಬನ್ವಾರಿಲಾಲ್ ಪುರೋಹಿತ್ ಬಳಿ ಪ್ರತಿಭಟನಾಕಾರರು ಬೇಡಿಕೆಯನ್ನಿಟ್ಟರು. ಇನ್ನು ವಿರೋಧ ಪಕ್ಷಗಳಾದ ಡಿಎಂಕೆ, ಸಿಪಿಐ ಹಾಗೂ ಸಿಪಿಐ-ಎಂ ಪ್ರತಿಭಟನೆಗೆ ಬೆಂಬಲ ನೀಡಿದವು. ಸಂವಿಧಾನದ 161ನೆ ವಿಧಿಯ ಪ್ರಕಾರ ಏಳು ಅಪರಾಧಿಗಳನ್ನು ಬಿಡುಗಡೆಗೊಳಿಸುಂತೆ ಎಂಡಿಎಂಕೆ ಪಕ್ಷದ ಅಧ್ಯಕ್ಷ ವೈಕೋ ಗವರ್ನರ್ ಬಳಿ ಕೇಳಿಕೊಂಡಿದ್ದಾರೆ. ಅಪರಾಧಿಗಳಾದ ಪೆರಾರಿವಲನ್, ಮುರುಗನ್, ನಳಿನ್, ಸಂತನ್, ರವಿಚಂದ್ರನ್, ಜಯಕುಮಾರ್ ಹಾಗೂ ರೋಬೆರ್ಟ್ ಪ್ಯಾಸ್ ನನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಈ 7 ಜನ ಕೈದಿಗಳು 27 ವರ್ಷಗಳ ಹಿಂದೆ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





