ನವದೆಹಲಿ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಆತ್ಮನಿರ್ಭರ್ ಮಹತ್ವವನ್ನು ಸಾರಲು ವಿಶೇಷವಾಗಿ ಅಲಂಕರಿಸಿದ ಮೆಟ್ರೋವನ್ನು, ದೆಹಲಿ ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಮಂಗುಸಿಂಗ್ ಯಮುನಾ ಬ್ಯಾಂಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಾರಂಭಿಸಿದರು.

ಈ ವಿಶೇಷ ರೈಲು ಆಜಾದಿ ಕಾ ಅಮೃತ ಮಹೋತ್ಸವದ ಸ್ಮರಣಾರ್ಥ ಪ್ರಾರಂಭಿಸಲಾಗಿದ್ದು, ಗಣರಾಜ್ಯೋತ್ಸವದ ನಿಮಿತ್ತ ಸಾಂಕೇತಿಕವಾಗಿ ಈ ರೈಲನ್ನು ಆರಂಭಿಸಲಾಗಿದೆ. ಇದು ಜನರ ಸೇವೆಯಲ್ಲಿ ಮುಂದುವರಿಯುತ್ತದೆ.
ಮೆಟ್ರೋದ ವಿಶೇಷತೆ: ತ್ರಿವರ್ಣ ಧ್ವಜದ ಬಣ್ಣಗಳಿಂದ ಕೂಡಿದ ಮೆಟ್ರೋದ ಹೊರಭಾಗವೂ ನೋಡಲು ಆಕರ್ಷಣೀಯವಾಗಿದೆ. ಈ ಮೇಟ್ರೋ ಒಟ್ಟಾರೆ 8 ಬೋಗಿಗಳನ್ನು ಹೊಂದಿದೆ. ಈ ಮೆಟ್ರೋದ ಹೊರಭಾಗದಲ್ಲಿ ಭಾರತೀಯರು, ಇಲ್ಲಿನ ಜನರ ಸಂಸ್ಕೃತಿ ಮತ್ತು ಕಳೆದ 75 ವರ್ಷಗಳಲ್ಲಿನ ಸಾಧನೆಗಳ ಇತಿಹಾಸವನ್ನು ಚಿತ್ರಿಸುವ ಮೂಲಕ ಆತ್ಮನಿರ್ಭರ್ ಭಾರತದ ಹೊಸ ಚೈತನ್ಯವನ್ನು ಮೂಡಿಸಿದ್ದಾರೆ. ಕೊರೊನಾ ಕುರಿತು ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





