ಹುಬ್ಬಳ್ಳಿ:ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವ ಸಂಭ್ರಮದೊಂದಿಗೆ 76ನೆ ಸ್ವಾತಂತ್ರ್ಯ ಉತ್ಸವದ ಸಂಭ್ರಮದಲ್ಲಿದ್ದ ಹುಬ್ಬಳ್ಳಿ ಜನತೆಗೆ ರಾಯಣ್ಣ ಜಯಂತಿಯ ಸಂಭ್ರಮ ಕೂಡ ಹುಬ್ಬಳ್ಳಿಯಲ್ಲಿ ಕಳೆಗಟ್ಟಿದೆ.

ಹೌದು ಇಂದು ಸಂಜೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಶಕ್ತಿ ವತಿಯಿಂದ ಯಲ್ಲಾಪುರ ಓಣಿ, ಪಾಟೀಲ್ ಗಲ್ಲಿ, ದೇಸಾಯಿ ಓಣಿಯ ರಾಯಣ್ಣ ಅನುಯಾಯಿಗಳು ನಾಸಿಕ್ ಡೊಳ್ಳಿನ ಮೆರವಣಿಗೆಯನ್ನ ಸುಮಾರು 5 ಕಿಲೋಮೀಟರ್ ವರೆಗೂ ನಡೆಸಿದರು.

ಬಂಕಾಪುರ ಚೌಕ್ ನಿಂದ ಶುರುವಾದ ಡೊಳ್ಳಿನ ನಾದದ ಮೆರವಣಿಗೆ ದುರ್ಗದಬೈಲ್ ಮೂಲಕ ಸಂಗೊಳ್ಳಿ ರಾಯಣ್ಣನ ಮೂರ್ತಿವರೆಗೂ ಜರುಗಿತು ,ಈ ವೇಳೆ ಯುವಕ ಯುವತಿಯರ ಡೊಳ್ಳಿನ ನಾದಕ್ಕೆ ಜನರು ಮನಸೋತು ಹೋದರು
ಈ ವೇಳೆ ಮಾತನಾಡಿದ ಸಂಜೀವಗೌಡ ಪಾಟೀಲ DJ ,ಅಥವಾ ಇನ್ನಿತರೆ ಮನರಂಜನೆ ಮಾಡುವ ಬದಲು ಸಾಂಸ್ಕೃತಿಕ ನಾಸಿಕ್ ಡೊಳ್ಳು ತರಸಲಾಗಿದ್ದು ನಮ್ಮ ಸಂಸ್ಕೃತಿಯನ್ನ ನಾವು ಎಲ್ಲಾ ದಿನಗಳಲ್ಲಿ ಕಾಪಾಡಿಕೊಂಡು ಹೋಗಬೇಕು ಎಂದು ಹೇಳಿದರು.

bigtvnews | Hubli Dharwad News | Kannada News | Karnataka News Hubli News | News In Hubli | Local news

