ಧಾರವಾಡ ಚಿಕ್ಕೋಡಿ ತಾಲೂಕಿನ ಹಿರೇಕೋಳಿಯ ಪೂಜ್ಯ ಜೈನ ಮುನಿಗಳಾದ ರಾಮಕುಮಾರ ನಂದಿ ಇವರನ್ನು ದುಷ್ಕರ್ಮಿಗಳು ಬರ್ಬರವಾಗಿ ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ. ಇದನ್ನು ವಿಶ್ವ ಹಿಂದು ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ವಿಶ್ವ ಹಿಂದು ಪರಿಷತ್ ಕ್ಷೇತ್ರೀಯ. ಧಾರ್ಮಿಕ ವಿಭಾಗ ಪ್ರಚಾರದಕ ಬಸವರಾಜ ಜಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು
ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು.
ತಪ್ಪಿಸ್ಥತರಿಗೆ ಕಠಿಣ ಶಿಕ್ಷೆ ನೀಡಬೇಕು.
ಸರ್ಕಾರ ಸಾಧು-ಸಂತರಿಗೆ ಸೂಕ್ತ ರಕ್ಷಣೆ ಕೊಡಬೇಕು, ಸರ್ಕಾರ ಮುಂದೆ ಈ ರೀತಿ ಯಾವುದೇ ದುರ್ಘಟನೆ ಆಗದಂತೆ ಕ್ರಮ ವಹಿಸಿ ಮುನ್ನೆಚ್ಚರಿಕೆ
ಕ್ರಮ ಕೈಗೊಳ್ಳಬೇಕು. ಸಮಾನ ನಾಗರೀಕ ಸಂಹಿತೆ ಶಿಘ್ರವೇ ದೇಶದಲ್ಲಿ ಜಾರಿಗೊಳಿಸಬೇಕು.
ರಾಷ್ಟ್ರದಲ್ಲಿ ಎಲ್ಲರಿಗೂ ಒಂದೇ ಕಾನೂನು ಮೂಲಕ ರಾಷ್ಟ್ರದ ಹಿತ ಕಾಪಾಡಲು ಸಮಾನ ನಾಗರೀಕ ಸಂಹಿತೆಯನ್ನು ತರಲು ವಿಶ್ವ ಹಿಂದು ಪರಿಷತ್’ ಒತ್ತಾಯಪಡಿಸುತ್ತದೆ ಎಂದರು. ವಿ ಹಿ ಪ ರಾಜ್ಯದ ಅಧ್ಯಕ್ಷರು.ಡಾ ಎಸ್.ಆರ್.ರಾಮನಗೌಡರ ,ಬಸವರಾಜ ಕೌಜಲಗಿ,ಲಕ್ಷಣ ಹೂಗಾರ,ಮಹೇಶ ಪಾಟೀಲ,ವಿರುಪಾಕ್ಷ ಜೋಡಳ್ಳಿ,ರವಿ ಕುಮಾರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





