ಬೆಂಗಳೂರು: ಹಬ್ಬಗಳು ಬಂತೆಂದರೆ ಸಾಕು ಸಾರ್ವಜನಿಕ ಬಸ್ಗಳು ನಿರ್ವಹಣೆಗೆ ಸಾಕಾಗುವುದಿಲ್ಲ. ಮತ್ತೊಂದೆಡೆ ಖಾಸಗಿ ಬಸ್ ಮಾಲೀಕರು ದುಪ್ಟಟ್ಟು ಬೆಲೆಗೆ ಟಿಕೆಟ್ ದರ ಏರಿಕೆ ಮಾಡಿ ವಸೂಲಿಗೆ ನಿಂತು ಬಿಡುತ್ತವೆ. ಈ ದೀಪಾವಳಿ ಸಂದರ್ಭದಲ್ಲೂ ಆಗಿರುವುದು ಹಾಗೆಯೇ. ಇದನ್ನು ತಡೆಯಬೇಕಿರುವ ಸರ್ಕಾರ ಮಾತ್ರ ಎಚ್ಚರಿಕೆ ನೀಡಿ ಸುಮ್ಮನಾಗುವುದು ಸಾಮಾನ್ಯ ಎಂಬಂತಾಗಿದೆ.
ಈ ವರ್ಷದ ದೀಪಾವಳಿ ಹಬ್ಬದಾಚರಣೆಗೆ ದಿನಗಣನೆ ಶುರುವಾಗಿದೆ. ಇದೇ ರವಿವಾರದಿಂದಲೇ ಹಬ್ಬದ ಸಂಭ್ರಮ ನಡೆಯಲಿದೆ. ವೀಕೆಂಡ್ ಹಿನ್ನೆಲೆಯ ಈಗಾಗಲೇ ತಮ್ಮ ಊರಿಗಳತ್ತ ಮುಖ ಮಾಡಿದ್ದಾರೆ. ಬಹುತೇಕ ಮಂದಿ ಶುಕ್ರವಾರ ತಮ್ಮೂರುಗಳತ್ತ ತೆರಳಲಿದ್ದಾರೆ.ಹಬ್ಬದ ಪ್ರಯುಕ್ತ ಖಾಸಗಿ ಬಸ್ ನಿರ್ವಾಹಕರು ಟಿಕೆಟ್ ದರ ಹೆಚ್ಚಿಸಿದ್ದಾರೆ. ಹೀಗಾಗಿ ಸಾವಿರಾರು ಜನರು ತಮ್ಮ ಊರುಗಳಿಗೆ ತೆರಳಲು ಪರಿತಪಿಸಬೇಕಾಗಿದೆ. ಖಾಸಗಿ ಟ್ರಾವೆಲ್ ಆಪರೇಟರ್ಗಳು ಟಿಕೆಟ್ ಬೆಲೆಯನ್ನು ಶೇಕಡಾ 30 ರಷ್ಟು ಏರಿಕೆ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





