Breaking News

ರಾಜ್ಯ ಬಜೆಟ್- ವಾಣಿಜ್ಯ ನಗರಿ ಜನರಿಂದ ಮಿಶ್ರಪ್ರತಿಕ್ರಿಯೆ: ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪ…

ಹುಬ್ಬಳ್ಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟದ ಉತ್ತರ ಕರ್ನಾಟಕ ಭಾಗಕ್ಕೆ ನಿರಾಶದಾಯಕ ಬಜೆಟ್ ಆಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕೆಲ ಘೋಷಣೆ ಮಾಡಲಾಗಿದೆ.‌ ಇನ್ನು ಉತ್ತರ ಕರ್ನಾಟಕಕ್ಕೆ ಹೆಚ್ಚು ಒತ್ತು ಕೊಡಬೇಕಿತ್ತು‌ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಸ್ ಎಫ್ ಸಂಶಿಮಠ ಹೇಳಿದರು.ನಗರದಲ್ಲಿಂದು ಬಜೆಟ್ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ‌ನೀಡಿದ ಅವರು, ಎಲ್ಲಾ

ರಂಗಳಿಗೂ ಅವರು ಆದ್ಯತೆ ನೀಡಿದ್ದಾರೆ. ಆರೋಗ್ಯ, ಶಿಕ್ಷಣ, ತೋಟಗಾರಿಕೆ ಸೇರಿದಂತೆ ಎಲ್ಲಾ ರಂಗಳಿಗೂ ಮುಟ್ಟಿದ್ದಾರೆ. ಆದ್ರೆ ಯಾವುದನ್ನು ಕಾರ್ಯರೂಪಕ್ಕೆ ತರುವದಿಲ್ಲ. ಈಗಾಗಿ ಈ‌ಬಜೆಟ್ ನಾನು ಸ್ವಾಗತ ಮಾಡುವದಿಲ್ಲ ಎಂದರು.ಇದೊಂದು ಆಶಾದಾಯಕ ಬಜೆಟ್. ಇದರಲ್ಲಿ ಸುಳ್ಳು ಬಹಲ ಇವೆ‌. ಇವು ಜಾರಿಗೆ ಬರುವದು ಕಠಿಣ. ಹೀಗಾಗಿ ಇದೊಂದು ಆಸೆಗಳನ್ನು ಹುಟ್ಟು ಹಾಕಿದ ಬಜೆಟ್ಎಂ

ದರು.ಇದೇ ವೇಳೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕಾರ್ಯದರ್ಶಿ ರವೀಂದ್ರ ಬಳಿಗಾರ ಮಾತನಾಡಿ, ಇದೊಂದು ಒಳ್ಳೆ ಬಜೆಟ್. ರಾಜ್ಯದ ಎಲ್ಲಾ ಜನರನ್ನು ಗಮನದಲ್ಲಿ ಇಟ್ಟುಕೊಂಡು ಬಜೆಟ್ ಮಂಡನೆ ‌ಮಾಡಲಾಗಿದೆ. ನಮ್ಮ ಬೇಡಿಕೆಗಳು ಈ‌ ಬಜೆಟ್ ನಲ್ಲಿ ಈಡೇರಿಲ್ಲ. ಬೆಂಗಳೂರಿಗೆ ಸಿಕ್ಕ ಸ್ಥಾನ ಮಾನ ಉತ್ತರಕ ಕರ್ನಾಟಕಕ್ಕೆ ಸಿಕ್ಕಿಲ್ಲ. ಕೈಗಾರಿಕೆಗಳಿಗೆ, ಸ್ಟಾರ್ಟ್ ಅಫ್ ಗಳಿಗೆ ಹೆಚ್ಚಿನ ಒತ್ತು ನೀಡಬೇಕಿತ್ತು. ಆದ್ರೆ ವ್ಯಾಪಾರೋದ್ಯಮಿಗಳಿಗೆ

ಕೊಡಬೇಕಿತ್ತು.‌ಇದು ಸಮಾಧಾನಕರ ಬಜೆಟ್ ಎಂದರು.ಚಾರ್ಟರ್ಡ್ ಅಕೌಂಟೆಂಟ್ ಚನ್ನವೀರ ಮಂಗಳವಾಡಿ ಮಾತನಾಡಿ, ಇದೊಂದು ಎಲ್ಲ ವಲಯಗಳ ಬಜೆಟ್ ಆಗಿದೆ. ಐದು ಗ್ಯಾರಂಟಿಗಳ ನಡುವೆ ಎಲ್ಲಾ ವರ್ಗಗಳಿಗೆ ಬಜೆಟ್ ನಲ್ಲಿ ಒತ್ತು ನೀಡಲಾಗಿದ್ದು, ಎಲ್ಲಾವನ್ನು ಒಂದು ವರ್ಷದಲ್ಲಿ ಜಾರಿಗೆ ತರಲು ಸಾಧ್ಯವೇ ಎಂಬ ಪ್ರಶ್ನೆ ಇದೆ. ಇವೆಲ್ಲವನ್ನು ಜಾರಿಗೆ ತಂದರೆ ಇದೊಂದು ಅತ್ಯುತ್ತಮ ಬಜೆಟ್ ಆಗಲಿದೆ.‌ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಒತ್ತು ಕೊಟ್ಟಿಲ್ಲ. ಆಟಗಾರರಿಗೆ ಪ್ರೋತ್ಸಾಹ ದನ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಿ ಸ್ವಾಗತರ್ಹ ಎಂದರು.

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *