Breaking News

ಬಿರುಗಾಳಿ ಸಮೇತ ಸುರಿದ ಮಳೆಯಿಂದ ಲಕ್ಷಾಂತರ ರೂ ಪಾಲಿ ಹೌಸ್ ನಾಶ

ಒಂದು ಕಡೆ ಮುರಿದು ಬಿದ್ದಿರುವ ಪೈಪುಗಳು , ಇನ್ನೊಂದೆಡೆ ಹಾರಿ ಹೋದ ಪಾಲಿ ಹೌಸ್ ಮೇಲ್ಚಾವಣಿ , ಲಕ್ಷಾಂತರ ರೂ ಸಾಲ ಮಾಡಿ ನಿರ್ಮಿಸಿದ ಪಾಲಿ ಹೌಸ್ ತನ್ನ ಕಣ್ಣು
ಮುಂದೆ ನಾಶವಾಗಿ ರೈತನ ಕಣ್ಣಲ್ಲಿ ನೀರು , ಈ ದೃಶ್ಯಗಳು ಕಂಡುಬಂದಿದ್ದು
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಮರಾವತಿ ಎಂಬ ಗ್ರಾಮದಲ್ಲಿ.ಬೀಚಗೊಂಡಹಳ್ಳಿ ಗ್ರಾಮದ ನಿವಾಸಿ ಚಿಕ್ಕಮುನಿಯಪ್ಪನಿಹೆ ಸೇರಿದ ಪಾಲಿ ಹೌಸ್ , ಇಳಿ ವಯಸ್ಸಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಪ್ರಗತಿ ಕೃಷ್ಣ
ಬ್ಯಾಂಕ್ ನಲ್ಲಿ 38 ಲಕ್ಷ ಸಾಲ ಪಡೆದು ಬೆಳೆ ಬೆಳೆಯಲು ಸಿದ್ದ ಪಡಿಸಿದ್ದ ಪಾಲಿ ಹೌಸ್ ಈಗ
ನೆಲಸಮವಾಗಿದೆ .ನಿನ್ನೆ ಬಿರುಗಾಳಿ ಸಮೇತ ಸುರಿದ ಮಳೆಯಿಂದ ಪಾಲಿ ಹೌಸ್ ಸಂಪೂರ್ಣ ನಾಶವಾಗಿದೆ , ಇದರಿಂದ ಬ್ಯಾಂಕ್ ನಲ್ಲಿ ಪಡೆದ ಸಾಲ ತೀರಿಸಲು ದಾರಿ ಇಲ್ಲದೆ‌
ತಲೆ ಮೇಲೆ ಕೈ ಇಟ್ಟುಕೊಂಡು ಕೂರುವಂತಾಗಿದೆ , ಜೊತೆಗೆ ಹತ್ತು ಲಕ್ಷ ಕೈಸಾಲ ಮಾಡಿಕೊಂಡಿದ್ದಾನೆ , ಸಂಭಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ರೈತನಿಗೆ
ಸೂಕ್ತ ಪರಿಹಾರ ಕೊಡಿಸುವಂತೆ ರೈತ ಅಧಿಕಾರಿಗಳ ಮೊರೆ ಹೋಗಿದ್ದಾರೆ.

Share News

About admin

Check Also

ಕೈ ಕೊಟ್ಟ ಹುಡುಗಿ ಪ್ರೇಮಿ ದಗ ದಗ ಕಾಲೇಜು ಪ್ರೀತಿ ಜೀವನ್ಮರಣ ಹೋರಾಟ

ಆರು ವರ್ಷದಿಂದ ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಾಳೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಗಿರೀಶ್ ಎಂಬುವವನು ಚೊಕ್ಕ ಹಳ್ಳಿಯ ಚಿಕ್ಕಬಳ್ಳಾಪುರದವನಾಗಿರುತ್ತಾನೆ. ಆರು …

Leave a Reply

Your email address will not be published. Required fields are marked *