ಯಾದಗಿರಿ ಗುರುಮಠಕಲ್ :ನನ್ನ ಸ್ಚಗ್ರಾಮವಾಗಿರುವ ಕಂದಕೂರು ಗ್ರಾಮದಲ್ಲಿ ಜರುಗುವ ಕೊಂಡ್ಯೆಮ್ಮಾಯಿ ಜಾತ್ರೆಯು ತುಂಬಾವಿಶಿಷ್ಟವಾಗಿದೆ, ಆದ್ದರಿಂದ ನೆರೆಯ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದು ಶಾಸಕನಾದ ನಾನು ಗ್ರಾಮದ ಅಭಿವೃದ್ಧಿಗೆ ಬದ್ಧನಾಗಿದ್ದೆÃನೆ ಎಂದು ಶಾಸಕ ನಾಗನಗೌಡ ಕಂದಕೂರ ಬರವಸೆ ನೀಡಿದರು.ಹತ್ತಿರದ ಕಂದಕೂರಿನಲ್ಲಿ ಸೋಮವಾರ ಜರುಗಿದ ಗ್ರಾಮದೇವತೆ ಕೊಂಡ್ಯೆಮ್ಮಾಯಿಒ ಜಾತ್ರೆಯಲ್ಲಿ ರ್ಶನಪಡೆದು ಮಾತನಾಡಿದ ಅವರು, ಈಗಾಗಲೆ ದೇವಸ್ಥಾನದ ಅಭಿವೃದ್ಧಿಗಾಗಿ ರೂ.೧ ಕೋಟಿ ಅನುದಾನವನ್ನು ನೀಡಲಾಗಿದೆ, ಪ್ರವಾಸಿ ಕೇಂದ್ರವಾಗಿ ಬೆಟ್ಟವನ್ನು ಅಬಿವೃದ್ಧಿಪಡಿಸುವುದು, ಮೂಲಸೌರ್ಯಗಳನ್ನು ಕಲ್ಪಿಸುವುದು, ಉದ್ಯಾನವನದ ನರ್ಮಾಣ, ರಸ್ತೆ ನರ್ಮಾಣ, ಗ್ರಾಮದ ವಿವಿಧ ಬೇಡಿಕೆಗಳ ಪೂರೈಕೆಗಾಗಿ ನಾನು ಪ್ರಯತ್ನಿಸುತ್ತೆÃನೆ ಎಂದು ಹೇಳಿದರು.ಈಗಾಗಲೆ ಗ್ರಾಮದಲ್ಲಿನ ಸಿಸಿ ರಸ್ತೆ ಕಾಮಗಾರಿಗಾಗಿ ಅನುದಾನ ಬಿಡುಗಡೆ ಮಾಡಲಾಗಿದೆ. ನೀರು ಸರಬರಾಜು, ಚರಂಡಿ ವ್ಯವಸ್ಥೆ ಸೇರಿದಂತೆ ಎಲ್ಲಾ ಕಾಮಗಾರಿಗಳೂ ಆದಷ್ಟು ಬೇಗ ಜರುಗಲಿವೆ. ಇದು ಕೇವಲ ಒಂದು ರ್ಷದ ಅವಧಿಯಲ್ಲಿ ಮಾಡಿದ ಕೆಲಸಗಳಾಗಿದ್ದು, ಮುಂದಿನದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲಾಗುವುದು ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





