ಹುಬ್ಬಳ್ಳಿ : ಬಸವಣ್ಣನವರ ಬಗ್ಗೆ ಪಠ್ಯಪುಸ್ತಕ ವಿವಾದ ವಿಚಾರವಾಗಿ ನಾಡಿನ ಮಠಾಧೀಶರು ಸರ್ಕಾರಕ್ಕೆ ಪತ್ರ ಬರೆಯುತ್ತಾರೆಂದರೆ ಅದನ್ನ ಗಂಭೀರವಾಗಿ ಪರಿಗಣಿಸಬೇಕು .
ಪಠ್ಯದಲ್ಲಿ ಏನು ಲೋಪದೋಷವಾಗಿದೆ ಅದನ್ನು ಸರಿಪಡಿಸಬೇಕು . ಇಲ್ಲವಾಗಿದರೆ ಅದನ್ನ ತಿಳಿಸಿ . ಸುಮ್ಮನೆ ವಿವಾದ ಮಾಡೋದು ಸರಿಯಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ . ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಕೆಲವರು ವಿಷಯ ಗೊತ್ತಿಲ್ಲದೆ ಮಾತನಾಡುತ್ತಾರೆ .
ನಾನು ಕೂಡ ಬಸವಣ್ಣನವರ ಕುರಿತು ಪಠ್ಯದಲ್ಲಿ ಏನಾಗಿದೆ ಅನ್ನೋದನ್ನು ನೋಡಿಲ್ಲ . ಈಗ ಆ ಪ್ರತಿ ತರಿಸೋಕೆ ಹೇಳಿದ್ದೇನೆ . ಅದರಲ್ಲಿ ತಪ್ಪಾಗಿದ್ದರೆ ಖಂಡಿತ ಅದನ್ನು ಸರಿಪಡಿಸಬೇಕು . ಈ ಬಗ್ಗೆ ನಾನೂ ಕೂಡ ಸಿಎಂಗೆ ಹೇಳುತ್ತೇನೆ .
ಮಠಾಧೀಶರ ಪತ್ರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು . ನಂತರ ಸಚಿವ ಸಂಪುಟ ವಿಸ್ತರಣೆ ಕಾಲಾನುಕ್ರಮೇಣ ಆಗಬೇಕು . ಅದು ಸಿಎಂ ಹಾಗೂ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು . ಯಾಕೆ ತಡವಾಗುತ್ತಿದೆ ನನಗೆ ಗೊತ್ತಿಲ್ಲ . ಸಿಎಂ ಅವರೇ ಹೇಳಬೇಕು ಎಂದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

