Breaking News

ಮಠಾಧೀಶರ ಪತ್ರವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ; ಮಾಜಿ ಸಿಎಂ ಶೆಟ್ಟರ್

ಹುಬ್ಬಳ್ಳಿ : ಬಸವಣ್ಣನವರ ಬಗ್ಗೆ ಪಠ್ಯಪುಸ್ತಕ ವಿವಾದ ವಿಚಾರವಾಗಿ ನಾಡಿನ ಮಠಾಧೀಶರು ಸರ್ಕಾರಕ್ಕೆ ಪತ್ರ ಬರೆಯುತ್ತಾರೆಂದರೆ ಅದನ್ನ ಗಂಭೀರವಾಗಿ ಪರಿಗಣಿಸಬೇಕು .

ಪಠ್ಯದಲ್ಲಿ ಏನು ಲೋಪದೋಷವಾಗಿದೆ ಅದನ್ನು ಸರಿಪಡಿಸಬೇಕು . ಇಲ್ಲವಾಗಿದರೆ ಅದನ್ನ ತಿಳಿಸಿ . ಸುಮ್ಮನೆ ವಿವಾದ ಮಾಡೋದು ಸರಿಯಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ . ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಕೆಲವರು ವಿಷಯ ಗೊತ್ತಿಲ್ಲದೆ ಮಾತನಾಡುತ್ತಾರೆ .

ನಾನು ಕೂಡ ಬಸವಣ್ಣನವರ ಕುರಿತು ಪಠ್ಯದಲ್ಲಿ ಏನಾಗಿದೆ ಅನ್ನೋದನ್ನು ನೋಡಿಲ್ಲ . ಈಗ ಆ ಪ್ರತಿ ತರಿಸೋಕೆ ಹೇಳಿದ್ದೇನೆ . ಅದರಲ್ಲಿ ತಪ್ಪಾಗಿದ್ದರೆ ಖಂಡಿತ ಅದನ್ನು ಸರಿಪಡಿಸಬೇಕು . ಈ ಬಗ್ಗೆ ನಾನೂ ಕೂಡ ಸಿಎಂಗೆ ಹೇಳುತ್ತೇನೆ .

ಮಠಾಧೀಶರ ಪತ್ರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು . ನಂತರ ಸಚಿವ ಸಂಪುಟ ವಿಸ್ತರಣೆ ಕಾಲಾನುಕ್ರಮೇಣ ಆಗಬೇಕು . ಅದು ಸಿಎಂ ಹಾಗೂ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು . ಯಾಕೆ ತಡವಾಗುತ್ತಿದೆ ನನಗೆ ಗೊತ್ತಿಲ್ಲ . ಸಿಎಂ ಅವರೇ ಹೇಳಬೇಕು ಎಂದರು .

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *