Breaking News

ಶೋ ಒಳಗಡೆ ಅವಿತುಕೊಂಡ ಕುಳಿತ ಮಿಡಿನಾಗರ ಹಾವು

ಧಾರವಾಡ: ಮನೆಯ ಹೊರಗಡೆ ಇಟ್ಟಿದ್ದ ಬೂಟಿನೊಳಗೆ ಮಿಡಿ ನಾಗರವೊಂದು ಅವಿತು ಕುಳಿತು ಕೆಲಕಾಲ ಆತಂಕ ಸೃಷ್ಟಿಸಿತ್ತು. ಈ ಘಟನೆ ಧಾರವಾಡ ಹೊಸಯಲ್ಲಾಪುರದ ಮೇದಾರ ಓಣಿಯಲ್ಲಿ ನಡೆದಿದೆ.

ನಂದಿತಾ ಶಿವನಗೌಡರ ಎಂಬುವವರ ಮನೆಯ ಮುಂದೆ ಇಟ್ಟಿದ್ದ ಬೂಟಿನಲ್ಲಿ ಮಿಡಿನಾಗರ ಅವಿತು ಕುಳಿತಿತ್ತು. ಕಸ ಗೂಡಿಸುವ ಸಂದರ್ಭದಲ್ಲಿ ಅದನ್ನು ನೋಡಿದ ಮನೆಯವರು ಕೂಡಲೇ ಉರಗ ತಜ್ಞ ಯಲ್ಲಪ್ಪ ಜೋಡಳ್ಳಿ ಅವರಿಗೆ ಮಾಹಿತಿ ಮುಟ್ಟಿಸಿದ್ದರು. ಸ್ಥಳಕ್ಕೆ ಬಂದ ಯಲ್ಲಪ್ಪ ಮಿಡಿ ನಾಗರ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟು ಬಂದಿದ್ದಾರೆ.

ಶೂ ಒಳಗಡೆ ಅವಿತು ಕುಳಿತಿದ್ದ ನಾಗರ ಹಾವನ್ನು ನೋಡದೇ ಶೂ ಹಾಕಿಕೊಂಡಿದ್ದರೆ ಅನಾಹುತ ಸಂಭವಿಸುತ್ತಿತ್ತು. ಹಾವುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನೂ ಸಹ ಯಲ್ಲಪ್ಪ ಮೂಡಿಸಿದ್ದಾರೆ.

Share News

About BigTv News

Check Also

ಕಮಿಷನರ್ ಖದರ್‌ಗೆ ಕ್ರಿಮಿನಲ್‌ಗಳಿಗೆ ನಡುಕ..! ಸಾಹೇಬರೇ ಫುಲ್ ಅಲರ್ಟ್ — ಖಾಕಿ ಮೇಲೆ ಕಲೆ ಬೀಳದಂತೆ ಕಠಿಣ ಕಾವಲು!

ರೌಡಿಗಳಿಂದ ಅಂತರ..! ಡ್ರಗ್ಸ್ ಪೆಡ್ಲರ್‌ಗಳಿಗೆ ನೋ ಎಂಟ್ರಿ — ಕ್ರಿಮಿನಲ್‌ಗಳಿಂದ ಖಾಕಿ ದೂರವಿದ್ದರೆ ಪೊಲೀಸ್ ಇಲಾಖೆ ಇನ್ನಷ್ಟು ಕ್ಲೀನ್..! ಖಾಕಿ …

Leave a Reply

Your email address will not be published. Required fields are marked *