ಹುಬ್ಬಳ್ಳಿ ಇತಿಹಾಸದಲ್ಲಿ ಐವತ್ತು ವರ್ಷದ ನಂತರ ಮೊದಲ ಎನ್ ಕೌಂಟರ್!. ಅವಳಿನಗರದ ಪೊಲೀಸರಿಂದ ಮಗು ಕೊಲೆ ಆರೋಪಿ ಎನ್ ಕೌಂಟರ್ ಮಾಡಲಾಗಿದೆ. ಅಶೋಕನಗರ ಪೊಲೀಸರಿಂದ ಆರೋಪಿ ಮೇಲೆ ಪೈರಿಂಗ್ ನಡೆದಿದೆ.ಆರೋಪಿ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಾಗಬೇಕಿದೆ.
ಪೊಲೀಸ್ ಕಮಿಷನರ್ ಶಶಿಕುಮಾರ್
ಇಂದು ಬೆಳಗಿನ ಜಾವ 11 ಗಂಟೆಗೆ ಬಾಲಕಿ ಅಪಹರಿಸಿ ಹತ್ಯೆ ಮಾಡಿದ್ದ ಆರೋಪಿ,ನಂತರ ನಗರದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿ,ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆದಿತ್ತು.ಪಕ್ಷಾತೀತವಾಗಿ ಆರೋಪಿಗೆ ಶಿಕ್ಷೆ ಯಾಗಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿತ್ತು.ಇದೀಗ ಪೊಲೀಸರಿಂದ ಅಧಿಕೃತವಾಗಿ ಆರೋಪಿ ಬಂಧಿಸಿ ಶೂಟ್ ಮಾಡಲಾಗಿದೆ. ಗುಂಡಿನ ದಾಳಿಯಲ್ಲಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿರುವ ಆರೋಪಿ,ಎನ್ ಕೌಂಟರ್ ಹಿನ್ನಲೆಯಲ್ಲಿ ಸಾರ್ವಜನಿಕರಿಂದ ಹರ್ಷೋದ್ಗಾರ ಮೂಡಿದೆ.ಪೊಲೀಸ್ ಕಮಿಷನರ್ ಶಶಿಕುಮಾರ್ ಗೆ ಘೋಷಣೆ ಕೂಗಿ ಜೈಕಾರಕೂಗುತ್ತಿದ್ದಾರೆ.