ಹುಬ್ಬಳ್ಳಿ : ಅವಳಿ ನಗರದಲ್ಲಿ ಮನಕುಲಕುವ ಘಟನೆ ನಡೆದಿದ್ದು ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಬಡ್ಡಿ ಕಿರುಕುಳ ನೀಡಿರುವದು ಹುಬ್ಬಳ್ಳಿಯ
ಎಸ್ ಎಂ ಕೃಷ್ಣ ನಗರದಲ್ಲಿ ನಡೆದಿದೆ.
ಬಾಷಾ ಸಾಬ್ ಸಂಕೇಶ್ವರ್ (65) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.ಮನೆಯಲ್ಲಿ ಬಡತನ ಇದ್ದರು ದುಡಿದು ಬದಕುವ ಚಲ ಬಿಡದ ಈ ವ್ಯಕ್ತಿ
ಕಳೆದ ಹಲವು ದಿನಗಳಿಂದ ಬಾಷಾ ಸಾಬ್ ನಾಲ್ಕೈದು ಜನರ ಬಳಿ ಕೈಗಡ ಸಾಲ ಪಡೆದಿದ್ದನಂತೆ. ಅದರಂತೆಯೇ ಹಣ ವಾಪಸ್ ನೀಡೋದಾಗಿ ಲಲಿತಾ, ಕಿಟ್ಯಾ, ವಿನೋದ… ಅಷ್ಪಕ್ ರಿಂದ ಕಿರುಕುಳ ನೀಡುತ್ತಿದ್ದರಂತೆ. ಅಲ್ದೇ ಲಲಿತಾ, ಕಿಟ್ಯಾ ರಿಂದ ದಿನ ದುಡಿಯುವ ಆಟೋ ಸಹ ಕಿತ್ತುಕೊಳ್ಳುವ ಮೂಲಕ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಮೃತ ವ್ಯಕ್ತಿ ವೀಡಿಯೋ ಮೂಲಕ ಆರೋಪ ಮಾಡಿದ್ದಾನೆ.
ಇನ್ನು ಗಾರ್ಡನ್ ಪೇಟೆಯಲ್ಲಿನ ಮನೆ ಮಾರುವ ವಿಚಾರದಲ್ಲೂ ಕೂಡ ಬಾಷಾ ಗೆ ಮೋಸ ಮಾಡಿರುವ ಆರೋಪ ಮಾಡಿದ್ಸು, ಕಾಂಗ್ರೆಸ್ ಮುಖಂಡ… ನೇತೃತ್ವದಲ್ಲಿ ಸಾಲ ಪಡೆದಿದ್ದರ ಬಗ್ಗೆ ಮಾತುಕತೆ ಸಹ ನಡೆದಿತ್ತಂತೆ.
1.80 ಲಕ್ಷಕ್ಕೆ ನಡೆದಿದ್ದ ಮಾತುಕತೆ ವಿಚಾರವನ್ನ ವಿಡಿಯೋದಲ್ಲಿ ತಿಳಿಸಿರೋ ಬಾಷಾ. ಯಾವುದೇ ರೀತಿಯಾಗಿ ಹಣ ನೀಡಿದೇ ಮಾನಸಿಕ ಕಿರುಕುಳದಿಂದಲೂ ನೊಂದಿದ್ದ ಎನ್ನಲಾಗಿದೆ.ಇನ್ನು
ಮನೆಗೆ ಖರೀದಿಸಿದ್ದ ಸೀರಾಜ್ ಮಿರ್ಜಿಯಿಂದ ಹಾಗೂ
ಈತನೊಂದಿಗೆ ಬಶೀರ್ ಎಂಬುವವರಿಂದಲೂ ಸಹ ಹಲ್ಲೆ ಹಾಗೂ ಧಮಕಿ ಹಾಕಿರೋದಾಗಿ ವೀಡಿಯೋದಲ್ಲಿ ಆರೋಪ ಮಾಡಿದ್ದಾನೆ. ಹೀಗಾಗಿ ಸಾಲಗಾರರಿಂದ ಬೇಸತ್ತು ವೀಡಿಯೋ ಮಾಡಿ ಪೋಲಿಸ್ ಆಯುಕ್ತ ಎನ್ ಶಶಿಕುಮಾರ ಅವರಿಗೆ ಮನವಿ ಮಾಡಿ ನ್ಯಾಯ ಒದಗಿಸುವಂತೆ ಕೋರಿ ಆತ್ಮಹತ್ಯೆ ಶರಣಾದ ಭಾಷಾ.
ನಿನ್ನೆ ರಾತ್ರಿ 8 ಗಂಟೆಯ ವೇಳೆಗೆ ಕುಟುಂಬಸ್ಥರ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ತೆರಳಿದಾಗ ಆತ್ಮಹತ್ಯೆ ಗೆ ಶರಣಾಗಿದ್ದಾನೆ…..
bigtvnews | Hubli Dharwad News | Kannada News | Karnataka News Hubli News | News In Hubli | Local news

