ಮಣಕವಾಡ: ನಮ್ಮದೇಶದಲ್ಲಿ ಅನೇಕ ಮಠ ಮಾನ್ಯಗಳು ಹುಟ್ಟಿಕೊಂಡಿವೆ ಅಲ್ಲದೇ ಸಮಾಜದ ಅಭಿವೃದ್ಧಿಗೆ ಮಠ ಮಾನ್ಯಗಳು ಶ್ರಮಿಸುತ್ತಿವೆ. ಇಲ್ಲಿ ಯಾವುದೇ ಲಿಂಗಾಯತ, ವಿರಶೈವ ಮಠ ಎಂಬುವಂತ ಭಿನ್ನತೆಗಳಿಲ್ಲ ಇಲ್ಲಿ ಎಲ್ಲವೂ ಒಂದೆಯಾಗಿದೆ ಎಂದು ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು.ಸಿದ್ಧರಾಮದೇವರ ಚರಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಭಾವೈಕ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜಕ್ಕಾಗಿ ಕ್ರಾಂತಿಯಾಗಿರುವುದು ಕಲ್ಯಾಣ ಕ್ರಾಂತಿ ಬಸವಣ್ಣನವರ ನೇತೃತ್ವದಲ್ಲಿ ಆಗಿರುವ ಕ್ರಾಂತಿ ಧಾರ್ಮಿಕ ಕ್ರಾಂತಿ ಅಸ್ಪೃಶ್ಯತೆ ಮೆಟ್ಟಿ ನಿಂತು ಸಮಾಜದ ಒಡಕುಗಳನ್ನು ತಿದ್ದುವ ಕ್ರಾಂತಿಯಾಗಿದ್ದು ಹನ್ನೆರಡನೇ ಶತಮಾನದಲ್ಲಿ ಎಂದು ಅವರು ಹೇಳಿದರು.ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಾಗಿದೆ ನೂರಾರು ಗ್ರಾಮಗಳಲ್ಲಿ ಸಂಚರಿಸುವ ಮೂಲಕ ಆಧ್ಯಾತ್ಮಿಕ ಚಿಂತನಯನ್ನು ಸಾರ್ವಜನಿಕರಿಗೆ ನೀಡಿ ಧಾರ್ಮಿಕ ಹಾಗೂ ಆಧ್ಯಾತ್ಮಕ ಕ್ಷೇತ್ರದಲ್ಲಿ ಮಹತ್ತರವಾದ ಪಾತ್ರ ನಿಭಾಯಿಸಿದವರು ಸಿದ್ಧರಾಮದೇವರ ಅವರಿಗೆ ಚರಪಟ್ಟಾಧಿಕಾರ ನಡೆಯುತ್ತಿರುವುದು ವಿಶೇಷವಾಗಿದೆ ಎಂದರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





