ಧಾರವಾಡ :ಶ್ರೀ ಮಹದೇವಪ್ಪ ಬಸಲಿಂಗಪ್ಪ ಹಳ್ಳಿ ಪ್ರಥಮ ದರ್ಜೆ ಕಾಲೇಜು, ಅಣ್ಣಿಗೇರಿ , ಮಹಿಳಾ ಘಟಕದ ವತಿಯಿಂದ ವಿದ್ಯಾರ್ಥಿನಿಯರಿಗೆ ವಿವಿಧ ಆಟಗಳನ್ನು ಏರ್ಪಡಿಸಲಾಗಿತ್ತು. ಜೊತೆಗೆ ನೈಲ್ ಆರ್ಟ್, ಮೆಹಂದಿ, ಕೇಶ್ ವಿನ್ಯಾಸ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಎಲ್ಲಾ ವಿದ್ಯಾರ್ಥಿಗಳು ಉತ್ಸುಕತೆಯಿಂದ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಸಂಯೋಜಕರಾದ ವಿಜಯಲಕ್ಷ್ಮಿ ಪಾಟೀಲ ಅವರು, ಈ ರೀತಿಯ ಕಾರ್ಯಕ್ರಮಗಳು
ವಿದ್ಯಾರ್ಥಿನಿಯರಲ್ಲಿ ಹೆಚ್ಚು ಆತ್ಮವಿಶ್ವಾಸ ತುಂಬುತ್ತವೆ ಮತ್ತು ತಮ್ಮ ಪ್ರತಿಭೆ ಗುರುತಿಸಿಕೊಳ್ಳಲು ನೆರವಾಗುತ್ತವೆ ಎಂದರು. ಶ್ರೀಮತಿ ದಿಲ್ಲಶದ ನದಾಫ್ ಅವರು ಮುಖ್ಯ ಅತಿಥಗಳಾಗಿ ಆಗಮಿಸಿದ್ದರು, ಮೋತಿಲಾಲ್ ರಾಥೋಡ, ಪ್ರಾಂಶುಪಾಲರು ಮಾತನಾಡಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ
ಈ ದೇಶದ ಪ್ರಗತಿಗೆ ಅವರ ಕೊಡುಗೆ ಬಹಳ ಅವಶ್ಯವಾಗಿದೆ ಎಂದರು. ಮಹಿಳಾ ಘಟಕ ದ ಸದಸ್ಯರಾದ ಕೀರ್ತಿ ಕಳ್ಳೇರ ಮತ್ತು ಶೋಭಾ ವೇದಿಕೆ ಹಂಚಿಕೊಂಡರು.
ಡಾ. ಎಫ.ಬಿ ಆನಿ ,ಡಾ. ಅನ್ನಪ್ಪ ರೂಟ್ಟಿಗವಾಡ ಮತ್ತು ಎಲ್ಲಾ ಸಿಬಂದ್ದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶ್ರೀಧರ ಲೋಣಕರ್ ವಂದನಾರ್ಪಣೆ ಮಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news




