Breaking News

ಹುಬ್ಬಳ್ಳಿಯಲ್ಲಿ ಬಿ.ಜೆ.ಪಿ. ಕಾರ್ಯಕರ್ತರ ಬೃಹತ್‌ ಸಮಾವೇಶ

ಹುಬ್ಬಳ್ಳಿಯ ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್ ನಲ್ಲಿ ಇಂದು ಧಾರವಾಡ ಲೋಕಸಭಾ ವ್ಯಾಪ್ತಿಯ ಭಾರತೀಯ ಜನತಾ ಪಾರ್ಟಿಯ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲೆ ಹಾಗೂ ಧಾರವಾಡ ಗ್ರಾಮಾಂತರ ಜಿಲ್ಲೆಗಳ ಸಭೆಯನ್ನು ರಾಜ್ಯದ ಮಾಜಿ ಸಚಿವರಾದ ಶ್ರೀ ಕೆಎಸ್ಈಶ್ವರಪ್ಪ ಹಾಗೂ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರು ಉದ್ಘಾಟಿಸಿದರು. ಸಭೆಯಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಮಾತನಾಡಿ ಪಕ್ಷ ಸಂಘಟನೆ ಮತ್ತು ತಮ್ಮ ಲೋಕಸಭಾ ವ್ಯಾಪ್ತಿಯ ಕೆಲಸಗಳ ಕುರಿತು ವಿವರ ನೀಡಿದರು. ಕುರಿತು ಮಾತನಾಡಿದರು ಅದೇ ರೀತಿ ಕಾಂಗ್ರೆಸ್ ವಿರುದ್ಧ ಐದು ಭರವಸೆ ಗ್ಯಾರಂಟಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಕೆಎಸ್ ಈಶ್ವರಪ್ಪನವರು ಕಾಂಗ್ರೆಸ್ ಭರವಸೆಗಳ ಕುರಿತು ಆಕ್ರೋಶಗೊಂಡರು,

ಸಭೆಯಲ್ಲಿ ಶಾಸಕರಾದ ಶ್ರೀ ಅರವಿಂದ್ ಬೆಲ್ಲದ್ ಮಾಜಿ ಸಚಿವರಾದ ಶ್ರೀ ಶಂಕರ್ ಪಾಟೀಲ್ ಮುನಿಯನಕೊಪ್ಪ ಮುಖಂಡರಾದ ನಾಗರಾಜ್ ಛಬ್ಬಿ ಮಹಾನಗರ ಬಿಜೆಪಿ ಅಧ್ಯಕ್ಷರಾದ ಸಂಜಯ್ ಕಪಟಕರ್ ಧಾರವಾಡ ಗ್ರಾಮಾಂತರ ಅಧ್ಯಕ್ಷರಾದ ಶ್ರೀ ಬಸವರಾಜ ಕುಂದಗೋಳಮಠ ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರು ಹಾಗಿರುವ ಶ್ರೀಮತಿ ವೀಣಾ ಬರದ್ವಾಡ ಉಪಮಹಾಪೌರರು ಹಾಗಿರುವ ಸತೀಶ್ ಹಾನಗಲ್ ಲೋಕಸಭಾ ಸಂಚಾಲಕರಾದ ಷಣ್ಮುಖ ಗುರಿಕಾರ್ ಸಹ ಸಂಚಾಲಕರಾದ ಶಿವ ಮೆಣಸಿನಕಾಯಿ ಮೊದಲಾದವರು ಉಪಸ್ಥಿತರಿದ್ದರು.

Share News

About BigTv News

Check Also

ಐದು ಕ್ರಿಕೆಟ್ ಬುಕ್ಕಿಗಳಿಗೆ ಪೊಲೀಸರೇ ಸಾಥ್…? ಶಾಕಿಂಗ್ ಅಕ್ರಮ ಜಾಲ ಬಯಲು!

ಕ್ರಿಕೆಟ್ ಬೆಟ್ಟಿಂಗ್ ದಂಧೆ ಇದು ಸಾದಾ ವಿಷಯ ಅಲ್ಲ! ಐಪಿಎಲ್ ಸಮಯದಲ್ಲಿ ಜೋರಾಗೋ ಈ ಅಕ್ರಮ ಜಾಲ ಈಗ ಸ್ಫೋಟಕ …

Leave a Reply

Your email address will not be published. Required fields are marked *